ಗಡ್ಡಕ್ಕೆ ಬೆಂಕಿ ಬಿದ್ದಮೇಲೆ ಬಾವಿ ತೋಡುವ ನಾಟಕವೇಕೆ?
ಮುಂಜಾಗ್ರತೆಯಿದ್ದಿದ್ದರೆ ಬರ ಕಡಿಮೆ ಮಾಡಬಹುದಿತ್ತು
ಇತ್ತ ರಾಜ್ಯ ಸರ್ಕಾರ ಬರದ ಸಮೀಕ್ಷೆ(?)ಯನ್ನು ಮುಗಿಸಿ ಕೂತಿದೆ, ಅತ್ತ ಕೇಂದ್ರ ಸರ್ಕಾರ ದುಡಿಯುವ ವರ್ಗದ ಪಿಎಫ್ ಹಣಕ್ಕೆ ಬೇಡದ ಕಾನೂನು ರೂಪಿಸಿ ದುಡಿಯುವ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ.
ಸಾಲು ಸಾಲಾಗಿ ಸಾವಿರಾರು ರೈತರು ಬರಗಾಲ, ಬೆಳೆ ವೈಫಲ್ಯ, ಸಾಲಭಾದೆಗಳಿಂದ ಚೇತರಿಸಿಕೊಳ್ಳಲಾಗದೆ ಆತ್ಮಹತ್ಯೆ ದಾರಿ ಹಿಡಿದಾಗ ತಿರುಗಿಯೂ ನೋಡದ ಸರ್ಕಾರ ರಾಜಕಾರಣಕ್ಕಾಗಿ ಬರದ ಪ್ರವಾಸ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ. ರಾಜ್ಯ ಸರ್ಕಾರವು ಬರಗಾಲ ಮುಗಿಯುವ ವೇಳೆಗೆ ಮಳೆ ಬರುವ ಮುನ್ನ ಬರದ ಸಮೀಕ್ಷೆ ನೆಡೆಸಲು ಪ್ರವಾಸ ಕೈಗೊಂಡು ಅಲ್ಲಲ್ಲಿ ವಿರೋಧ ಮತ್ತು ಹಾರ-ತುರಾಯಿಗಳ ಜೈಕಾರವನ್ನು ಹಾಕಿಸಿಕೊಂಡು ಬೇಸಿಗೆಯ ಉರಿಬಿಸಿಲು ತಾಳಲಾಗದೆ ವಿಧಾನಸೌಧದ ಹವಾ ನಿಯಂತ್ರಣ ಕೊಠಡಿಗೆ ತಲುಪಿದೆ.
ಇತ್ತೀಚೆಗೆ ಯಡ್ಯೂರಪ್ಪ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ತಕ್ಷಣ ತಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಬರದ ಪರಿಶೀಲನೆ ಮಾಡಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ ಎಂದರು. ಹೀಗೆ ಹೇಳಿದ ಕೂಡಲೆ ನಿದ್ದೆಯಿಂದೆದ್ದ ಮಗು ಚಡಪಡಿಸುವಂತೆ ಸರ್ಕಾರವು ಚಡಪಡಿಸುತ್ತಾ ಅವರಿಗಿಂತ ಮೊದಲು ಬರದ ಸಮೀಕ್ಷೆ ಮಾಡಬೇಕೆಂದು ಉತ್ತರ ಕರ್ನಾಟಕದ ಜಿಲ್ಲೆಗಳ ಕದತಟ್ಟಿ ಬರಲು ಮಾನ್ಯ ಮುಖ್ಯಮಂತ್ರಿಗಳೆ ಅಧಿಕಾರಿಗಳ ವರ್ಗವನ್ನು ಕಟ್ಟಿಕೊಂಡು ಬೆಂಗಳೂರಿನಿಂದ ಹೊರಟೆ ಬಿಟ್ಟರು.
ಯಡ್ಯೂರಪ್ಪ ಬರದ ಸಮೀಕ್ಷೆ ಎಂದು ಹೇಳುವ ತನಕ ಸರ್ಕಾರಕ್ಕೆ ಅದರ ಅರಿವಿಲ್ಲದೆ ಕೂತೀತ್ತೆ? ರಾಜ್ಯ ಸರ್ಕಾರವು ಕಳೆದ ತಿಂಗಳ ಬಜೆಟ್ ಅಧಿವೇಶನದ ಮುನ್ನ ಸಮೀಕ್ಷೆ ಮಾಡಿದ್ದರೆ ಹಲವು ಯೋಜನೆಗಳನ್ನು ಜಾರಿ ಮಾಡಿ, ಒಂದಷ್ಟು ಹಣವನ್ನಾದರೂ ನೀಡಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ. ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ನೀಡಿದ ಸಾವಿರಾರು ಕೋಟಿ ರೂಪಾಯಿಯು ಏನಾಯಿತೆಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ಕೇಳಿದಾಗಲೆ ತಿಳಿದಿದ್ದು ಕೇಂದ್ರ ಕೊಟ್ಟ ಹಣವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಲ್ಲವಲ್ಲವೆಂದು.
ಯಡ್ಡ್ಯೂರಪ್ಪನವರ ಆದೇಶದ ಮೇರೆಗೆ ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ಬರ ಪರಿಹಾರಕ್ಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳವೂ ಇದೇ ನಿಲುವನ್ನು ತೆಗೆದುಕೊಳ್ಳಲಿ. ಸರ್ಕಾರಕ್ಕೆ ಬರ ಪರಿಹಾರಕ್ಕೆ ಹಣದ ಕೊರತೆ ಇದ್ದರೆ ಅದು ಅನುಕೂಲವಾಗುತ್ತದೆ.
ಮುಖ್ಯಮಂತ್ರಿಗಳು ಬರುವ ರಸ್ತೆಯಲ್ಲಿ ಧೂಳಿರಬಾರದೆಂದು ಇಲಾಖೆ ರಸ್ತೆಗೆ ಸುರಿಯುವ ನೀರು ಒಂದು ಗ್ರಾಮಕ್ಕೆ ಕುಡಿಯುವ ನೀರಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಶಿಷ್ಟಾಚಾರದಿಂದ ಪೋಲಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಪ್ರಯತ್ನ ಮಾಡುವುದೇ ಇಲ್ಲವೇ?
ನೀರಿಗಾಗಿ ಅರ್ಧವರ್ಷ ಕಳೆದ ನೆರಗುಂದ-ನವಲಗುಂದದ ಕಳಸಾ ಬಂಡೂರಿ ಹೋರಾಟಕ್ಕೆ ಸೂಕ್ತ ಪರಿಹಾರ ನೀಡಲು ಈ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೇನಾಗಿದೆ ಎಂದು ತಿಳಿಯುತ್ತಿಲ್ಲ. ಅಂದು ಅದಕ್ಕೆ ಪರಿಹಾರ ಸಿಕ್ಕಿದ್ದರೆ ಇವತ್ತು ಉತ್ತರ ಕರ್ನಾಟಕದ ನೀರಿನ ಸಮಸ್ಯೆಗೆ ಒಂದಷ್ಟು ಮುಕ್ತಿ ಸಿಗುತ್ತಿತ್ತೇನೋ? ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿಲ್ಲ. ಕೇವಲ ಕಳಸಾ ಬಂಡೂರಿಯಲ್ಲ, ಕೋಲಾರದ ನೀರಿನ ಸಮಸ್ಯೆಗೂ ಪರಿಹಾರವಿಲ್ಲ.
ಯಾವುದೇ ಸಮಸ್ಯೆಗಳು, ಹೋರಾಟಗಳಿಗೂ ತಲೆ ಕೆಡಿಸಿಕೊಳ್ಳದೆ ನೆಮ್ಮದಿಯಿಂದಿರುವ ಈ ಸರ್ಕಾರಕ್ಕೆ ಏನಾಗಿದೆ ಎಂಬುದು ಮಾತ್ರ ನಿಗೂಢ. ಸರ್ಕಾರ ಚೇತರಿಸಿಕೊಳ್ಳಲಿ ಎಂಬುದಷ್ಟೆ ನಾಡಿನ ಜನರ ಒಕ್ಕೊರಲಿನ ಅಭಿಪ್ರಾಯ.
ರಾಜ್ಯ ಸರ್ಕಾರ ಈಗ ಬರದ ಸಮೀಕ್ಷೆ ಮಾಡುವ ಬದಲು ಹಿಂದಿನ ಮಳೆಗಾಲದಲ್ಲೇ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಿದ್ದರೆ, ಇವತ್ತು ಇಷ್ಟು ಭೀಕರ ಬರಗಾಲವನ್ನು ನೋಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಕೆರೆಗಳು ಮಾತ್ರ ಬರಿದಾಗಿಲ್ಲ. ಇಂದು ಅಣೆಕಟ್ಟುಗಳಲ್ಲಿ ನೆಲಕಾಣುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರಕೃತಿಯ ನಿಯಂತ್ರಣ ಸರ್ಕಾರದ ಕೈಯಲಿಲ್ಲ ಎನ್ನುವ ಅರಿವಿದೆ. ಆದರೆ, ಪರ್ಯಾಯ ಮಾರ್ಗವನ್ನು, ನಾಶವಾಗುತ್ತಿರುವ ಬೆಳೆಗಳ ಉಳಿವಿಗೆ ಪ್ರಯತ್ನವನ್ನು ಸರಿಯಾದ ಸಮಯದಲ್ಲಿಯಾವ ಸರ್ಕಾರಗಳು ಮಾಡಿಲ್ಲ. ಕೇಂದ್ರ ಸರ್ಕಾರವು ನೀರಿನ ರೈಲನ್ನು ಜಾರಿಗೆ ತಂದಿದೆ. ಬರದ ಜಾಗಕ್ಕೆ ನೀರನ್ನು ಆ ರೈಲು ಕೊಂಡೊಯ್ಯುತ್ತದೆ. ಅಂತಹ ಮಹತ್ತರವಾದ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಬಹುದಿತ್ತು. ನೀರಿನ ಟ್ಯಾಂಕರ್ಗಳಲ್ಲಿ ನೀರನ್ನು ತುಂಬಿಕೊಂಡು ಬರದ ಪ್ರದೇಶಗಳಿಗೆ ತಲುಪಿಸಿ ಜನ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸಬಹುದಿತ್ತು.
ಮುಂಜಾಗ್ರತೆಯಿದ್ದಿದ್ದರೆ ಬರ ಕಡಿಮೆ ಮಾಡಬಹುದಿತ್ತು
ಇತ್ತ ರಾಜ್ಯ ಸರ್ಕಾರ ಬರದ ಸಮೀಕ್ಷೆ(?)ಯನ್ನು ಮುಗಿಸಿ ಕೂತಿದೆ, ಅತ್ತ ಕೇಂದ್ರ ಸರ್ಕಾರ ದುಡಿಯುವ ವರ್ಗದ ಪಿಎಫ್ ಹಣಕ್ಕೆ ಬೇಡದ ಕಾನೂನು ರೂಪಿಸಿ ದುಡಿಯುವ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ.
ಸಾಲು ಸಾಲಾಗಿ ಸಾವಿರಾರು ರೈತರು ಬರಗಾಲ, ಬೆಳೆ ವೈಫಲ್ಯ, ಸಾಲಭಾದೆಗಳಿಂದ ಚೇತರಿಸಿಕೊಳ್ಳಲಾಗದೆ ಆತ್ಮಹತ್ಯೆ ದಾರಿ ಹಿಡಿದಾಗ ತಿರುಗಿಯೂ ನೋಡದ ಸರ್ಕಾರ ರಾಜಕಾರಣಕ್ಕಾಗಿ ಬರದ ಪ್ರವಾಸ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ. ರಾಜ್ಯ ಸರ್ಕಾರವು ಬರಗಾಲ ಮುಗಿಯುವ ವೇಳೆಗೆ ಮಳೆ ಬರುವ ಮುನ್ನ ಬರದ ಸಮೀಕ್ಷೆ ನೆಡೆಸಲು ಪ್ರವಾಸ ಕೈಗೊಂಡು ಅಲ್ಲಲ್ಲಿ ವಿರೋಧ ಮತ್ತು ಹಾರ-ತುರಾಯಿಗಳ ಜೈಕಾರವನ್ನು ಹಾಕಿಸಿಕೊಂಡು ಬೇಸಿಗೆಯ ಉರಿಬಿಸಿಲು ತಾಳಲಾಗದೆ ವಿಧಾನಸೌಧದ ಹವಾ ನಿಯಂತ್ರಣ ಕೊಠಡಿಗೆ ತಲುಪಿದೆ.
ಇತ್ತೀಚೆಗೆ ಯಡ್ಯೂರಪ್ಪ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ತಕ್ಷಣ ತಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಬರದ ಪರಿಶೀಲನೆ ಮಾಡಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ ಎಂದರು. ಹೀಗೆ ಹೇಳಿದ ಕೂಡಲೆ ನಿದ್ದೆಯಿಂದೆದ್ದ ಮಗು ಚಡಪಡಿಸುವಂತೆ ಸರ್ಕಾರವು ಚಡಪಡಿಸುತ್ತಾ ಅವರಿಗಿಂತ ಮೊದಲು ಬರದ ಸಮೀಕ್ಷೆ ಮಾಡಬೇಕೆಂದು ಉತ್ತರ ಕರ್ನಾಟಕದ ಜಿಲ್ಲೆಗಳ ಕದತಟ್ಟಿ ಬರಲು ಮಾನ್ಯ ಮುಖ್ಯಮಂತ್ರಿಗಳೆ ಅಧಿಕಾರಿಗಳ ವರ್ಗವನ್ನು ಕಟ್ಟಿಕೊಂಡು ಬೆಂಗಳೂರಿನಿಂದ ಹೊರಟೆ ಬಿಟ್ಟರು.
ಯಡ್ಯೂರಪ್ಪ ಬರದ ಸಮೀಕ್ಷೆ ಎಂದು ಹೇಳುವ ತನಕ ಸರ್ಕಾರಕ್ಕೆ ಅದರ ಅರಿವಿಲ್ಲದೆ ಕೂತೀತ್ತೆ? ರಾಜ್ಯ ಸರ್ಕಾರವು ಕಳೆದ ತಿಂಗಳ ಬಜೆಟ್ ಅಧಿವೇಶನದ ಮುನ್ನ ಸಮೀಕ್ಷೆ ಮಾಡಿದ್ದರೆ ಹಲವು ಯೋಜನೆಗಳನ್ನು ಜಾರಿ ಮಾಡಿ, ಒಂದಷ್ಟು ಹಣವನ್ನಾದರೂ ನೀಡಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ. ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ನೀಡಿದ ಸಾವಿರಾರು ಕೋಟಿ ರೂಪಾಯಿಯು ಏನಾಯಿತೆಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ಕೇಳಿದಾಗಲೆ ತಿಳಿದಿದ್ದು ಕೇಂದ್ರ ಕೊಟ್ಟ ಹಣವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಲ್ಲವಲ್ಲವೆಂದು.
ಯಡ್ಡ್ಯೂರಪ್ಪನವರ ಆದೇಶದ ಮೇರೆಗೆ ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ಬರ ಪರಿಹಾರಕ್ಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳವೂ ಇದೇ ನಿಲುವನ್ನು ತೆಗೆದುಕೊಳ್ಳಲಿ. ಸರ್ಕಾರಕ್ಕೆ ಬರ ಪರಿಹಾರಕ್ಕೆ ಹಣದ ಕೊರತೆ ಇದ್ದರೆ ಅದು ಅನುಕೂಲವಾಗುತ್ತದೆ.
ಮುಖ್ಯಮಂತ್ರಿಗಳು ಬರುವ ರಸ್ತೆಯಲ್ಲಿ ಧೂಳಿರಬಾರದೆಂದು ಇಲಾಖೆ ರಸ್ತೆಗೆ ಸುರಿಯುವ ನೀರು ಒಂದು ಗ್ರಾಮಕ್ಕೆ ಕುಡಿಯುವ ನೀರಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಶಿಷ್ಟಾಚಾರದಿಂದ ಪೋಲಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಪ್ರಯತ್ನ ಮಾಡುವುದೇ ಇಲ್ಲವೇ?
ನೀರಿಗಾಗಿ ಅರ್ಧವರ್ಷ ಕಳೆದ ನೆರಗುಂದ-ನವಲಗುಂದದ ಕಳಸಾ ಬಂಡೂರಿ ಹೋರಾಟಕ್ಕೆ ಸೂಕ್ತ ಪರಿಹಾರ ನೀಡಲು ಈ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೇನಾಗಿದೆ ಎಂದು ತಿಳಿಯುತ್ತಿಲ್ಲ. ಅಂದು ಅದಕ್ಕೆ ಪರಿಹಾರ ಸಿಕ್ಕಿದ್ದರೆ ಇವತ್ತು ಉತ್ತರ ಕರ್ನಾಟಕದ ನೀರಿನ ಸಮಸ್ಯೆಗೆ ಒಂದಷ್ಟು ಮುಕ್ತಿ ಸಿಗುತ್ತಿತ್ತೇನೋ? ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿಲ್ಲ. ಕೇವಲ ಕಳಸಾ ಬಂಡೂರಿಯಲ್ಲ, ಕೋಲಾರದ ನೀರಿನ ಸಮಸ್ಯೆಗೂ ಪರಿಹಾರವಿಲ್ಲ.
ಯಾವುದೇ ಸಮಸ್ಯೆಗಳು, ಹೋರಾಟಗಳಿಗೂ ತಲೆ ಕೆಡಿಸಿಕೊಳ್ಳದೆ ನೆಮ್ಮದಿಯಿಂದಿರುವ ಈ ಸರ್ಕಾರಕ್ಕೆ ಏನಾಗಿದೆ ಎಂಬುದು ಮಾತ್ರ ನಿಗೂಢ. ಸರ್ಕಾರ ಚೇತರಿಸಿಕೊಳ್ಳಲಿ ಎಂಬುದಷ್ಟೆ ನಾಡಿನ ಜನರ ಒಕ್ಕೊರಲಿನ ಅಭಿಪ್ರಾಯ.
ರಾಜ್ಯ ಸರ್ಕಾರ ಈಗ ಬರದ ಸಮೀಕ್ಷೆ ಮಾಡುವ ಬದಲು ಹಿಂದಿನ ಮಳೆಗಾಲದಲ್ಲೇ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಿದ್ದರೆ, ಇವತ್ತು ಇಷ್ಟು ಭೀಕರ ಬರಗಾಲವನ್ನು ನೋಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಕೆರೆಗಳು ಮಾತ್ರ ಬರಿದಾಗಿಲ್ಲ. ಇಂದು ಅಣೆಕಟ್ಟುಗಳಲ್ಲಿ ನೆಲಕಾಣುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರಕೃತಿಯ ನಿಯಂತ್ರಣ ಸರ್ಕಾರದ ಕೈಯಲಿಲ್ಲ ಎನ್ನುವ ಅರಿವಿದೆ. ಆದರೆ, ಪರ್ಯಾಯ ಮಾರ್ಗವನ್ನು, ನಾಶವಾಗುತ್ತಿರುವ ಬೆಳೆಗಳ ಉಳಿವಿಗೆ ಪ್ರಯತ್ನವನ್ನು ಸರಿಯಾದ ಸಮಯದಲ್ಲಿಯಾವ ಸರ್ಕಾರಗಳು ಮಾಡಿಲ್ಲ. ಕೇಂದ್ರ ಸರ್ಕಾರವು ನೀರಿನ ರೈಲನ್ನು ಜಾರಿಗೆ ತಂದಿದೆ. ಬರದ ಜಾಗಕ್ಕೆ ನೀರನ್ನು ಆ ರೈಲು ಕೊಂಡೊಯ್ಯುತ್ತದೆ. ಅಂತಹ ಮಹತ್ತರವಾದ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಬಹುದಿತ್ತು. ನೀರಿನ ಟ್ಯಾಂಕರ್ಗಳಲ್ಲಿ ನೀರನ್ನು ತುಂಬಿಕೊಂಡು ಬರದ ಪ್ರದೇಶಗಳಿಗೆ ತಲುಪಿಸಿ ಜನ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸಬಹುದಿತ್ತು.
Comments
Post a Comment