Skip to main content
ಧರ್ಮವನ್ನು ಆಚರಿಸಬೇಕು. ಧರ್ಮದಿಂದ ಲೋಕಕ್ಕೆ ಹಿತವಾಗುವುದು. ಧರ್ಮವನ್ನು ಆಚರಿಸುವವನಿಗೆ ಶ್ರೇಯಸ್ಸು ಲಭಿಸುವುದು. ಧರ್ಮದ ಆಚರಣೆಯೆಂದರೆ ಧರ್ಮವನ್ನು ಉಂಟುಮಾಡುವ ಶ್ರೇಷ್ಠವಾದ ಕರ್ಮಗಳ ಆಚರಣೆ ಎಂದರ್ಥ. ಇಂತಹ ಕರ್ಮಗಳನ್ನು ಆಚರಿಸುವುದಕ್ಕೂ ಒಂದು ನಿರ್ದಿಷ್ಟವಾದ ಕಾಲದ ಅನಿವಾರ್ಯತೆ ಇರುವುದು. ಹಾಗಾಗಿ ಧರ್ಮವೂ ಕಾಲವನ್ನು ಆಧರಿಸಿಕೊಂಡಿದೆ ಎನ್ನಬಹುದು. ಅಕಾಲದಲ್ಲಿ ಮಾಡಲ್ಪಡುವ ಕರ್ಮವು ಧರ್ಮವೆನಿಸುವುದಿಲ್ಲ. ಅಂದರೆ ವಿಹಿತವಲ್ಲದ ಕಾಲದಲ್ಲಿ ಆಚರಿಸಲ್ಪಡುವ ಕರ್ಮಗಳು ಧಮೋತ್ಪತ್ತಿಗೆ ಕಾರಣವಾಗುವುದಿಲ್ಲ. ಆದ್ದರಿಂದಲೇ ಯಾವ ಕಾಲಕ್ಕೆ ಯಾವುದು ಮಾಡಲ್ಪಡಬೇಕು ಎಂದು ವೇದವು ಕರ್ಮವನ್ನು ವಿಧಾನ ಮಾಡುತ್ತದೆ. ‘ಕಾಲೇ ಸಂಧ್ಯಾಮುಪಾಸೀತ’ ಎಂಬುದೊಂದು ವಿಧಿವಾಕ್ಯವಿದೆ. ಅಂದರೆ ಸಂಧ್ಯಾವಂದನೆಗೆ ಯಾವ ಕಾಲ ವಿಹಿತವಾಗಿರುವುದೋ ಅಂತಹ ಕಾಲದಲ್ಲಿ ಸಂಧ್ಯಾವಂದನೆ ಮಾಡಬೇಕು. ಆ ಕಾಲವನ್ನು ಮೀರಿ ನಡೆದಾಗ ಕಾಲಾತಿಕ್ರಮವೆಂಬ ದೋಷವುಂಟಾಗುವುದು. ಅದು ಕಾಲಕ್ಕೆ ತಕ್ಕದಲ್ಲದ ಆಚರಣೆಯೆನಿಸುವುದು. ಅದರಿಂದ ಧರ್ಮವುಂಟಾಗದು. ಹಾಗಾಗಿ ಕಾಲಕ್ಕೂ ಧರ್ಮಕ್ಕೂ ಎಲ್ಲಿಲ್ಲದ ನಂಟು. ಕಾಲವಿಲ್ಲದೆ ಧರ್ಮವಿಲ್ಲ. ಅಥವಾ ಕಾಲವಲ್ಲದ್ದು ಧರ್ಮವಲ್ಲ. ಸಕಾಲದಲ್ಲಿ ಮಾಡಿದಾಗ ಅದು ಧರ್ಮವಾಗುತ್ತದೆ. ಅಂದರೆ ಕಾಲಧರ್ಮವೂ ಆಗುವುದು. ಧರ್ಮವೆಂದರೆ ಅದು ಅದೃಷ್ಟ. ಕಣ್ಣಿಗೆ ಕಾಣದು. ಆದರೆ ಕಾಲ ಪಕ್ವವಾದಾಗ ಫಲ ಕೊಡುವುದು. ಮಳೆಗಾಲದಲ್ಲಿ ಬಾವಿ-ಕೆರೆಗಳು ತುಂಬಬೇಕು. ನದೀ-ನದಗಳು ತುಂಬಿ ಹರಿಯಬೇಕು. ಹಾಗೆ ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಸೆಕೆ, ಇವೆಲ್ಲ ಕಾಲಧರ್ಮಗಳು. ಇವು ಕಾಲಕ್ಕೆ ಸರಿಯಾಗಿ ನಡೆಯದಿದ್ದರೆ ಅದು ಕಾಲದ ಅಧರ್ಮವಲ್ಲ. ನಮ್ಮ ಅಧರ್ಮದ ಕಾರಣದಿಂದಾಗುವ ಅನಿಷ್ಟ ಫಲ. ಅದನ್ನು ನಾವು ಅನಿವಾರ್ಯವಾಗಿ ಅನುಭವಿಸಲೇಬೇಕು. ಆದ್ದರಿಂದ ತಿಳಿದು ನಾವು ಧರ್ಮವನ್ನು ಆಚರಿಸಬೇಕು. ಅದು ಕಾಲಕ್ಕೆ ಅನುಗುಣವಾಗಿರಬೇಕು. ಅಂದರೆ ಕಾಲಕ್ಕೆ ತಪ್ಪದೆ ಒಪ್ಪುವ ರೀತಿಯಲ್ಲಿ ನಡೆಯಬೇಕು. ಆಗ ಕಾಲವೂ ತಪ್ಪುವುದಿಲ್ಲ. ಕಾಲಕ್ಕೆ ಸರಿಯಾಗಿ ಮಳೆ-ಬೆಳೆ ಎಲ್ಲವನ್ನೂ ನಿರೀಕ್ಷಿಸಬಹುದು. ಕಾಲಧರ್ಮವೂ ಚೆನ್ನಾಗಿ ನಡೆಯುವುದು. ಆಗಲೇ ಅದು ಧರ್ಮದ ಕಾಲವೆನಿಸುವುದು.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...