Skip to main content

ಉಸ್ತಾದ್ ಬಿಸ್ಮಿಲ್ಲಾ ಖಾನ್
ಮೊನ್ನೆ ಮಾರ್ಚ್ 21ರಂದು ನಮ್ಮ TRPಭಕ್ತ ಚಾನೆಲ್ಲುಗಳೆಲ್ಲಾ ಅಸಾದುದಿದ್ದೀನ್ ಓವೈಸಿ, ಕನ್ಹಯ್ಯಾಕುಮಾರ್ ನಂಥವರ ಬಗ್ಗೆ ಕಾರ್ಯಕ್ರಮಗಳ ಪ್ರಸಾರದಲ್ಲಿ Busyಯಾಗಿದ್ದರೆ ಭಾರತರತ್ನ ಪುರಸ್ಕೃತ ಮಹಾನ್ ಕಲಾಕಾರರೊಬ್ಬರ ಜನ್ಮದಿನ ಅವರ ನೆನಪೇ ಇಲ್ಲದಂತೆ ಕಳೆದುಹೋಯಿತು. 21 ಮಾರ್ಚ್ 1916ರಂದು ಬಿಹಾರ್ ನ ಧುಮ್ರಾವ್ ನಲ್ಲಿ ಭಾಷಾ ಖಾನ್ ಮತ್ತು ಮಿಠ್ಠನ್ ಬಾಯಿಯವರ ಎರಡನೆಯ ಪುತ್ರನಾಗಿ ಜನಿಸಿದವರೇ ಅಮೀರುದ್ದೀನ್. ಮುಂದೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂದು ಪ್ರಸಿದ್ಧಿ ಪಡೆದವರು. ವಂಶಪಾರಂಪರ್ಯವಾಗಿ ಬಂದ ಶಹನಾಯಿವಾದನವು ಹಿಂದೂಸ್ಥಾನಿ ಸಂಗೀತದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆಯಲು ಅಪಾರವಾದ ಕೊಡುಗೆಯನ್ನು ನೀಡಿದವರು.


         "ಜಗತ್ತಿನ ಅಂತ್ಯವಾದರೂ, ಸಂಗೀತ ಉಳಿಯುತ್ತದೆಂದು ನಂಬಿದ್ದ' ಕಲಾಸಾಮ್ರಾಜ್ಯದ ಉಸ್ತಾದರು ಒಂದು ಕಾಲದಲ್ಲಿ ಶಹನಾಯಿಯ ಲೋಕದಲ್ಲಿ ಏಕಸ್ವಾಮ್ಯತೆಯನ್ನು ಸ್ಥಾಪಿಸಿದವರು. ಈಗಲೂ ಶಹನಾಯಿಯೆಂದರೆ ನೆನಪಾಗುವುದು ಉಸ್ತಾದ್ ಬಿಸ್ಮಿಲ್ಲಾ ಖಾನರೇ. 1947 ಆಗಸ್ಟ 15ರಿಂದ ಹಿಡಿದು 2006ರ ಅವರ ಕೊನೆಯ ದಿನಗಳವರೆಗೂ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಪ್ರಧಾನಿ ಭಾಷಣದ ನಂತರ ಕಾರ್ಯಕ್ರಮವನ್ನು ನಡೆಸಿಕೊಡುವ ಗೌರವತ್ವವನ್ನು ಹೊಂದಿದ್ದರು. ಇವರ ಮೊದಲ ಗುರುವೆಂದರೆ ಇವರ ಮಾವನಾದ ಅಲಿ ಭಕ್ಷಿಯವರು. ಅಂದಿನಿಂದ ಹಿಂತಿರುಗಿದ ಸಂದರ್ಭವೇ ಇಲ್ಲ. ಕಲೆಯನ್ನೇ ಉಸರಾಗಿಸಿಕೊಂಡು ಬೆಳೆದು ಬಂದವರು.



   ಭೈರವಿ, ಕಾಫಿ, ಜೀವನಪುರಿಯಿರಬಹುದು, ಕಂಸ-ಜೋಗಕಂಸಗಳೇ ಇರಬಹುದು, ಯಾವುದನ್ನಾದರೂ ಕೇಳುಗರು ಮೈಮರೆಯುವಂತೆ ನುಡಿಸುವ ಶಕ್ತಿಯನ್ನು ಉಸ್ತಾದರು ಹೊಂದಿದ್ದರು. ಅವರ ಪ್ರತಿ ಉಸಿರಿನಲ್ಲಿ, ಬೆರಳುಗಳಲ್ಲಿ ಮಾಂತ್ರಿಕತೆಯಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಉಸ್ತಾದರು ಕನ್ನಡದ ಸನಾದಿ ಅಪ್ಪಣ್ಣ ಸೇರಿದಂತೆ ವಿವಿಧ ಭಾಷೆಯ ಹಲವಾರು ಚಿತ್ರಗಳಲ್ಲೂ ತಮ್ಮ ಶಹನಾಯಿಯ ಲಹರಿಯನ್ನು ಹರಿಸಿದ್ದಾರೆ. ವಿಶ್ವ ಮಟ್ಟದಲಿ ಭಾರತದ ಕೀರ್ತಿಯನ್ನು ಬೆಳಗಿದ ಈ ಮಹಾನ್ ಚೇತನವು 17-ಆಗಸ್ಟ-2006ರಲ್ಲಿ ಭಾರತದ ಮಣ್ಣಿನಲಿ ಲೀನವಾಯಿತು. ಅಸಹಿಷ್ಣುತೆ, ಕೋಮುವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರ ಇಂದಿನ ದಿನಗಳಲ್ಲಿ, ಭಾರತ ಮಾತೆಯ ಹೆಮ್ಮೆಯ ಪುತ್ರರಾದ ಮೌಲಾನಾ ಅಬುಲ್ ಕಲಾಮ್ ಆಜಾದ್, ಖಾನ್ ಅಬ್ದುಲ್ ಗಫರ್ ಖಾನ್, ಡಾ||ಎ.ಪಿ.ಜೆ. ಅಬ್ದುಲ್ ಕಲಾಮ್, ಝಾಕಿರ್ ಹುಸೇನ್ ನಂತವರ ಸಾಲಿನಲ್ಲಿರುವ ಇನ್ನೊಂದು ರತ್ನವೆಂದು ಉಸ್ತಾದರನ್ನು ಕರೆಯಬಹುದು.

        ಷಿಯಾ ಪಂಗಡದ ಮುಸಲ್ಮಾನರಾದರೂ, ಇತರ ಧರ್ಮಗಳನ್ನೂ ಉದ್ತಾದರು ಗೌರವಿಸುತ್ತಿದ್ದರು. ವಾರಣಾಸಿಯ ವಿಶ್ವನಾಥನೆದುರು ಎಷ್ಟೋ ಕಾರ್ಯಕ್ರಮಗಳನ್ನು ಇವರು ನಡೆಸಿದ್ದಾರೆ. ಸರಸ್ವತಿ ಇವರ ಇಷ್ಟದೇವತೆಯಾಗಿದ್ದು, ಹನುಮಂತ ದೇವಳವೊಂದರಲ್ಲಿ ಸದಾಕಾಲ ತಮ್ಮ ಶಹನಾಯಿ ವಾದನವನ್ನು ಅಭ್ಯಸಿಸುತ್ತಿದ್ದರು. ಇವರಿಗೆ ಶಾಂತಿನಿಕೇತನದ ವಿಶ್ವಭಾರತಿ ಹಾಗೂ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟನ್ನು ಕೊಟ್ಟು ಗೌರವಿಸಿವೆ. ಭಾರತ ಸರ್ಕಾರವು ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಭಾರತದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ನೀಡಿ ಗೌರವಿಸಿದೆ. ದೆಹಲಿಯ ಸಂಗೀತ ನಾಟಕ ಅಕಾಡಮಿಯು ಉಸ್ತಾದರ ಸ್ಮರಣಾರ್ಥ ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳ ಯುವ ಪ್ರತಿಭೆಗಳಿಗೆ 'ಉಸ್ತಾದ್ ಬಿಸ್ಮಿಲ್ಲಾಹ್ ಖಾನ್ ಯುವ ಪ್ರಶಸ್ತಿ'ಯನ್ನು 2007 ರಿಂದ ನೀಡಿ ಗೌರವಿಸುತ್ತಿದೆ.



        ಕೋಮು ದ್ವೇಷಗಳನ್ನು ಬಿತ್ತಿ ದೇಶದ ಸಾಮಾಜಿಕ ಪರಿಸ್ಥತಿಯನ್ನು ಹಾಳುಗೆಡುವಲು ಪ್ರಯತ್ನಿಸುತ್ತಿರುವವರ ನಡುವೆ ಉಸ್ತಾದರು ಒಂದು ಆದರ್ಶ. ಇಂತಹ ಇನ್ನಷ್ಟು ಉಸ್ತಾದರು ಭಾರತಮಾತೆಯ ಪದಕಮಲಗಳಲ್ಲಿ ಜನ್ಮ ತಳೆಯಲೆಂದು ಒಂದು ಚಿಕ್ಕ ಆಶಯ, ಈ ಲೇಖನವನ್ನು ಬರೆಯಲು ಎಡೆ ಮಾಡಿಕೊಟ್ಟಿತು.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...