ಧರ್ಮವನ್ನು ಆಚರಿಸಬೇಕು. ಧರ್ಮದಿಂದ ಲೋಕಕ್ಕೆ ಹಿತವಾಗುವುದು. ಧರ್ಮವನ್ನು ಆಚರಿಸುವವನಿಗೆ ಶ್ರೇಯಸ್ಸು ಲಭಿಸುವುದು. ಧರ್ಮದ ಆಚರಣೆಯೆಂದರೆ ಧರ್ಮವನ್ನು ಉಂಟುಮಾಡುವ ಶ್ರೇಷ್ಠವಾದ ಕರ್ಮಗಳ ಆಚರಣೆ ಎಂದರ್ಥ. ಇಂತಹ ಕರ್ಮಗಳನ್ನು ಆಚರಿಸುವುದಕ್ಕೂ ಒಂದು ನಿರ್ದಿಷ್ಟವಾದ ಕಾಲದ ಅನಿವಾರ್ಯತೆ ಇರುವುದು. ಹಾಗಾಗಿ ಧರ್ಮವೂ ಕಾಲವನ್ನು ಆಧರಿಸಿಕೊಂಡಿದೆ ಎನ್ನಬಹುದು. ಅಕಾಲದಲ್ಲಿ ಮಾಡಲ್ಪಡುವ ಕರ್ಮವು ಧರ್ಮವೆನಿಸುವುದಿಲ್ಲ. ಅಂದರೆ ವಿಹಿತವಲ್ಲದ ಕಾಲದಲ್ಲಿ ಆಚರಿಸಲ್ಪಡುವ ಕರ್ಮಗಳು ಧಮೋತ್ಪತ್ತಿಗೆ ಕಾರಣವಾಗುವುದಿಲ್ಲ. ಆದ್ದರಿಂದಲೇ ಯಾವ ಕಾಲಕ್ಕೆ ಯಾವುದು ಮಾಡಲ್ಪಡಬೇಕು ಎಂದು ವೇದವು ಕರ್ಮವನ್ನು ವಿಧಾನ ಮಾಡುತ್ತದೆ. ‘ಕಾಲೇ ಸಂಧ್ಯಾಮುಪಾಸೀತ’ ಎಂಬುದೊಂದು ವಿಧಿವಾಕ್ಯವಿದೆ. ಅಂದರೆ ಸಂಧ್ಯಾವಂದನೆಗೆ ಯಾವ ಕಾಲ ವಿಹಿತವಾಗಿರುವುದೋ ಅಂತಹ ಕಾಲದಲ್ಲಿ ಸಂಧ್ಯಾವಂದನೆ ಮಾಡಬೇಕು. ಆ ಕಾಲವನ್ನು ಮೀರಿ ನಡೆದಾಗ ಕಾಲಾತಿಕ್ರಮವೆಂಬ ದೋಷವುಂಟಾಗುವುದು. ಅದು ಕಾಲಕ್ಕೆ ತಕ್ಕದಲ್ಲದ ಆಚರಣೆಯೆನಿಸುವುದು. ಅದರಿಂದ ಧರ್ಮವುಂಟಾಗದು. ಹಾಗಾಗಿ ಕಾಲಕ್ಕೂ ಧರ್ಮಕ್ಕೂ ಎಲ್ಲಿಲ್ಲದ ನಂಟು. ಕಾಲವಿಲ್ಲದೆ ಧರ್ಮವಿಲ್ಲ. ಅಥವಾ ಕಾಲವಲ್ಲದ್ದು ಧರ್ಮವಲ್ಲ. ಸಕಾಲದಲ್ಲಿ ಮಾಡಿದಾಗ ಅದು ಧರ್ಮವಾಗುತ್ತದೆ. ಅಂದರೆ ಕಾಲಧರ್ಮವೂ ಆಗುವುದು. ಧರ್ಮವೆಂದರೆ ಅದು ಅದೃಷ್ಟ. ಕಣ್ಣಿಗೆ ಕಾಣದು. ಆದರೆ ಕಾಲ ಪಕ್ವವಾದಾಗ ಫಲ ಕೊಡುವುದು. ಮಳೆಗಾಲದಲ್ಲಿ ಬಾವಿ-ಕೆರೆಗಳು ತುಂಬಬೇಕು. ನದೀ-ನದಗಳು...
Reflect my thoughts n ideas! I'm also posting articles of my favorite journalists (Patriot_Journalists) Nation First ,No Compromise....