Skip to main content

Posts

Showing posts from 2016
ಧರ್ಮವನ್ನು ಆಚರಿಸಬೇಕು. ಧರ್ಮದಿಂದ ಲೋಕಕ್ಕೆ ಹಿತವಾಗುವುದು. ಧರ್ಮವನ್ನು ಆಚರಿಸುವವನಿಗೆ ಶ್ರೇಯಸ್ಸು ಲಭಿಸುವುದು. ಧರ್ಮದ ಆಚರಣೆಯೆಂದರೆ ಧರ್ಮವನ್ನು ಉಂಟುಮಾಡುವ ಶ್ರೇಷ್ಠವಾದ ಕರ್ಮಗಳ ಆಚರಣೆ ಎಂದರ್ಥ. ಇಂತಹ ಕರ್ಮಗಳನ್ನು ಆಚರಿಸುವುದಕ್ಕೂ ಒಂದು ನಿರ್ದಿಷ್ಟವಾದ ಕಾಲದ ಅನಿವಾರ್ಯತೆ ಇರುವುದು. ಹಾಗಾಗಿ ಧರ್ಮವೂ ಕಾಲವನ್ನು ಆಧರಿಸಿಕೊಂಡಿದೆ ಎನ್ನಬಹುದು. ಅಕಾಲದಲ್ಲಿ ಮಾಡಲ್ಪಡುವ ಕರ್ಮವು ಧರ್ಮವೆನಿಸುವುದಿಲ್ಲ. ಅಂದರೆ ವಿಹಿತವಲ್ಲದ ಕಾಲದಲ್ಲಿ ಆಚರಿಸಲ್ಪಡುವ ಕರ್ಮಗಳು ಧಮೋತ್ಪತ್ತಿಗೆ ಕಾರಣವಾಗುವುದಿಲ್ಲ. ಆದ್ದರಿಂದಲೇ ಯಾವ ಕಾಲಕ್ಕೆ ಯಾವುದು ಮಾಡಲ್ಪಡಬೇಕು ಎಂದು ವೇದವು ಕರ್ಮವನ್ನು ವಿಧಾನ ಮಾಡುತ್ತದೆ. ‘ಕಾಲೇ ಸಂಧ್ಯಾಮುಪಾಸೀತ’ ಎಂಬುದೊಂದು ವಿಧಿವಾಕ್ಯವಿದೆ. ಅಂದರೆ ಸಂಧ್ಯಾವಂದನೆಗೆ ಯಾವ ಕಾಲ ವಿಹಿತವಾಗಿರುವುದೋ ಅಂತಹ ಕಾಲದಲ್ಲಿ ಸಂಧ್ಯಾವಂದನೆ ಮಾಡಬೇಕು. ಆ ಕಾಲವನ್ನು ಮೀರಿ ನಡೆದಾಗ ಕಾಲಾತಿಕ್ರಮವೆಂಬ ದೋಷವುಂಟಾಗುವುದು. ಅದು ಕಾಲಕ್ಕೆ ತಕ್ಕದಲ್ಲದ ಆಚರಣೆಯೆನಿಸುವುದು. ಅದರಿಂದ ಧರ್ಮವುಂಟಾಗದು. ಹಾಗಾಗಿ ಕಾಲಕ್ಕೂ ಧರ್ಮಕ್ಕೂ ಎಲ್ಲಿಲ್ಲದ ನಂಟು. ಕಾಲವಿಲ್ಲದೆ ಧರ್ಮವಿಲ್ಲ. ಅಥವಾ ಕಾಲವಲ್ಲದ್ದು ಧರ್ಮವಲ್ಲ. ಸಕಾಲದಲ್ಲಿ ಮಾಡಿದಾಗ ಅದು ಧರ್ಮವಾಗುತ್ತದೆ. ಅಂದರೆ ಕಾಲಧರ್ಮವೂ ಆಗುವುದು. ಧರ್ಮವೆಂದರೆ ಅದು ಅದೃಷ್ಟ. ಕಣ್ಣಿಗೆ ಕಾಣದು. ಆದರೆ ಕಾಲ ಪಕ್ವವಾದಾಗ ಫಲ ಕೊಡುವುದು. ಮಳೆಗಾಲದಲ್ಲಿ ಬಾವಿ-ಕೆರೆಗಳು ತುಂಬಬೇಕು. ನದೀ-ನದಗಳು...

THOMAS ALVA EDISON

ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್  ಕಂಡುಹಿಡಿದನು ಅಂತ ಶಾಲೆಯಲ್ಲಿ ಉರು ಹೊಡೆದದ್ದು ನೆನಪಿದೆಯೇ?  ಮತ್ತೆ ನಿಕೋಲಾ ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ ನಡೆದಿತ್ತು.  ಈತ ಎಷ್ಟರ ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ. ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ.  ಕೈಯಲ್ಲಿ   4 ಸೆಂಟ್ಸ್ ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ.  ಕೆಲಸಕ್ಕೆ ಸೇರಿದ್ದು ಎಡಿಸನ್ ಬಳಿ.  ಸಂಬಳ ಅತೀ ಕಡಿಮೆ. ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್.  ಅದರಲ್ಲಿ ಅನೇಕ ನ್ಯೂನತೆ ಗಳಿದ್ದವು. ತಾನು ಆಲ್ಟರನೇಟಿವ ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ ಹೇಳಿದ.  ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ ದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಇರಬಹುದು. ಟೇಸ್ಲಾ ಹುಟ್ಟಿದ್ದು  1856 ಆಸ್ಟ್ರಿಯಾ ದಲ್ಲಿ. ( Arnold Schwarzenegger was born here too ) ಚಿಕ್ಕವನಿರಬೇಕಾದರೆ ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ ಆಗಿ ಒಂಬತ್ತು ತಿಂಗಳು ಹಾಸಿಗೆ ಹ...

Computers

First Generation of Computers (1942-1955) : The beginning of commercial computer age is from UNIVAC (Universal Automatic Computer). It was developed by two scientists Mauchly and Echert at the Census Department of United States in 1947. The first generation computers were used during 1942-1955. They were based on vacuum tubes. Examples of first generation computers are ENIVAC and UNIVAC-1. Advantages Vacuum tubes were the only electronic component available during those days.Vacuum tube technology made possible to make electronic digital computers.These computers could calculate data in millisecond. Disadvantages The computers were very large in size.They consumed a large amount of energy.They heated very soon due to thousands of vacuum tubes.They were not very reliable.Air conditioning was required.Constant maintenance was required.Non-portable.Costly commercial production.Limited commercial use.Very slow speed.Limited programming capabilities.Used machine language only.Used...

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲಭಾಸಿತ ಶೋಭಿತ ಲಿಂಗಮ್ | ಜನ್ಮಜ ದುಃಖ ವಿನಾಶಕ ಲಿಂಗಂ ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 1 || ಬ್ರಹ್ಮ , ವಿಷ್ಣು ಹಾಗೂ ದೇವಗಣಗಳಿಂದ ಯಾವಾಗಲೂ ಪೂಜಿಸಲ್ಪಡುವ , ಪರಮಪವಿತ್ರ , ನಿರ್ಮಲವಾಗಿರುವ ,ಎಲ್ಲಾ ಜೀವಿಗಳ ಮನೋಭಿಲಾಷೆಗಳನ್ನು ಪೂರೈಸುವ , ಜನ್ಮ , ಮೃತ್ಯುಗಳೆಂಬ ದುಃಖದಿಂದ ವಿಮೋಚನೆಗೊಳಿಸುವ ಯಾವಾಗಲೂ ಒಳ್ಳೆಯದನ್ನೇ ಮಾಡುವ ಶಿವಲಿಂಗಕ್ಕೆ ನನ್ನ ನಮಸ್ಕಾರಗಳು. ದೇವಮುನಿ ಪ್ರವರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಮ್ | ರಾವಣ ದರ್ಪ ವಿನಾಶನ ಲಿಂಗಂ ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 2 || ಯಾವಾಗಲೂ ದೇವಗಣಗಳಿಂದ , ಮುನಿಗಳಿಂದ ಅರ್ಚಿಸಲ್ಪಡುವ , ಕಾಮವನ್ನು (ವಿಷಯಾಸಕ್ತಿಗಳನ್ನು) ನಾಶಪಡಿಸುವ , ಕರುಣೆಯನ್ನು ಹೊಂದಿರುವ , ರಾವಣನ ಅಹಂಕಾರವನ್ನು ನಾಶಪಡಿಸಿರುವ , ಸದಾಶಿವ ಲಿಂಗಕ್ಕೆ ನನ್ನ ನಮಸ್ಕಾರಗಳು. ಸರ್ವ ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಮ್ | ಸಿದ್ಧ ಸುರಾಸುರ ವಂದಿತ ಲಿಂಗಂ ತತ್-ಪ್ರಣಮಾಮಿ ಸದಾಶಿವ ಲಿಂಗಮ್ || 3 || ಸರ್ವ ಸುಗಂಧದಿಂದ ಸುಲೇಪಿತವಾಗಿರುವ , ಬುದ್ಧಿ ಹಾಗೂ ಆತ್ಮಜ್ಞಾನವನ್ನು ವರ್ಧಿಸುವ , ಸಿದ್ಧಯೋಗಿಗಳಿಂದ , ದೇವತೆಗಳಿಂದ , ಅಸುರರಿಂದ ಯಾವಾಗಲೂ ವಂದಿಸಲ್ಪಡುವ ಸದಾಶಿವಲಿಂಗಕ್ಕೆ ನನ್ನ ನಮಸ್ಕಾರಗಳು. ಕನಕ ಮಹಾಮಣಿ ಭೂಷಿತ ಲಿಂಗಂ ಫಣಿಪತಿ ವೇಷ್ಟಿತ ಶೋಭಿತ ಲಿಂಗಮ್ | ದಕ್ಷ ಸುಯಜ್ಞ ವಿನಾಶನ ಲಿಂಗಂ ...

ಮುಂಜಾಗ್ರತೆಯಿದ್ದಿದ್ದರೆ ಬರ ಕಡಿಮೆ ಮಾಡಬಹುದಿತ್ತು

ಗಡ್ಡಕ್ಕೆ ಬೆಂಕಿ ಬಿದ್ದಮೇಲೆ ಬಾವಿ ತೋಡುವ ನಾಟಕವೇಕೆ? ಮುಂಜಾಗ್ರತೆಯಿದ್ದಿದ್ದರೆ ಬರ ಕಡಿಮೆ ಮಾಡಬಹುದಿತ್ತು ಇತ್ತ ರಾಜ್ಯ ಸರ್ಕಾರ ಬರದ ಸಮೀಕ್ಷೆ(?)ಯನ್ನು ಮುಗಿಸಿ ಕೂತಿದೆ, ಅತ್ತ ಕೇಂದ್ರ ಸರ್ಕಾರ ದುಡಿಯುವ ವರ್ಗದ ಪಿಎಫ್ ಹಣಕ್ಕೆ ಬೇಡದ ಕಾನೂನು ರೂಪಿಸಿ ದುಡಿಯುವ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ. ಸಾಲು ಸಾಲಾಗಿ ಸಾವಿರಾರು ರೈತರು ಬರಗಾಲ, ಬೆಳೆ ವೈಫಲ್ಯ, ಸಾಲಭಾದೆಗಳಿಂದ ಚೇತರಿಸಿಕೊಳ್ಳಲಾಗದೆ ಆತ್ಮಹತ್ಯೆ ದಾರಿ ಹಿಡಿದಾಗ ತಿರುಗಿಯೂ ನೋಡದ ಸರ್ಕಾರ ರಾಜಕಾರಣಕ್ಕಾಗಿ ಬರದ ಪ್ರವಾಸ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ. ರಾಜ್ಯ ಸರ್ಕಾರವು ಬರಗಾಲ ಮುಗಿಯುವ ವೇಳೆಗೆ ಮಳೆ ಬರುವ ಮುನ್ನ ಬರದ ಸಮೀಕ್ಷೆ ನೆಡೆಸಲು ಪ್ರವಾಸ ಕೈಗೊಂಡು ಅಲ್ಲಲ್ಲಿ ವಿರೋಧ ಮತ್ತು ಹಾರ-ತುರಾಯಿಗಳ ಜೈಕಾರವನ್ನು ಹಾಕಿಸಿಕೊಂಡು ಬೇಸಿಗೆಯ ಉರಿಬಿಸಿಲು ತಾಳಲಾಗದೆ ವಿಧಾನಸೌಧದ ಹವಾ ನಿಯಂತ್ರಣ ಕೊಠಡಿಗೆ ತಲುಪಿದೆ. ಇತ್ತೀಚೆಗೆ ಯಡ್ಯೂರಪ್ಪ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ತಕ್ಷಣ ತಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಬರದ ಪರಿಶೀಲನೆ ಮಾಡಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ ಎಂದರು. ಹೀಗೆ ಹೇಳಿದ ಕೂಡಲೆ ನಿದ್ದೆಯಿಂದೆದ್ದ ಮಗು ಚಡಪಡಿಸುವಂತೆ ಸರ್ಕಾರವು ಚಡಪಡಿಸುತ್ತಾ ಅವರಿಗಿಂತ ಮೊದಲು ಬರದ ಸಮೀಕ್ಷೆ ಮಾಡಬೇಕೆಂದು ಉತ್ತರ ಕರ್ನಾಟಕದ ಜಿಲ್ಲೆಗಳ ಕದತಟ್ಟಿ ಬರಲು ಮಾನ್ಯ ಮುಖ್ಯಮಂತ್ರಿಗಳೆ ಅಧಿಕಾರಿಗಳ ವರ್ಗವನ್ನು ಕಟ್ಟಿಕೊಂಡು ಬೆಂಗಳೂರಿ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಗೀತೆ ಏನನ್ನು ಬೋಧಿಸುತ್ತದೆ..?

ಗೀತೆ ಏನನ್ನು ಬೋಧಿಸುತ್ತದೆ..?ಹಲವರಿಗೆ ಗೊತ್ತೇ ಇಲ್ಲ..!!ಹಲವರಿಗೆ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ..!!ಹಲವರಿಗೆ ಗೀತೆ ಕೇವಲ ಮನುವಾದಿಗಳಿಗಷ್ಟೇ ಸೀಮಿತ..!!ಹಲವರಿಗೆ ಗೀತೆ ವಿವಾದ..!!ಕೆಲವರಿಗೆ ಸಂಸ್ಕೃತ ಬರುವುದಿಲ್ಲ..!!ಕೆಲವರಿಗೆ ಅರ್ಥವಾಗದ ಕಬ್ಬಿಣದ ಕಡಲೆ..!!ಹಲವರದು ಗೀತೆ ಆಧ್ಯಾತ್ಮದ ಬಗ್ಗೆ ಆಸಕ್ತಿಯಿರುವವರಿಗೆ ಮಾತ್ರ ಎಂಬ ಭಾವನೆ..!!ಹಾಗಾಗಿ ಗೀತೆಗೆ ಇಂದಿಗೂ ಜನಮನ್ನಣೆ ಸಿಕ್ಕಿಲ್ಲ.ಗೀತೆಯನ್ನು ಆಳವಾಗಿ ಅಧ್ಯಯನ ಮಾಡುವವರಿಲ್ಲ.ಸಕಲ ಶಾಸ್ತ್ರದ ಸಾರವಾಗಿರುವ ಗೀತೆ ಇಂದಿಗೂ ಹಲವರಿಗೆ ಅಸ್ಪೃಶ್ಯ..!! ಗೀತೆ ಕೇವಲ ಆಧ್ಯಾತ್ಮಕ್ಕಷ್ಟೇ ಸೀಮಿತವೇ..?ಖಂಡಿತ ಅಲ್ಲ.ಬದುಕಿನ ಎಲ್ಲ ವಿಷಯಗಳನ್ನೂ ಒಳಗೊಂಡಿರುವ ಗೀತೆ ಒಂದು ಆಚಾರಸಂಹಿತೆ.ಮನುಷ್ಯನ ಬದುಕು ಹೇಗಿರಬೇಕೆಂದು ತಿಳಿಸುವ ಕೈಪಿಡಿ.ಗೀತೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ಗೀತೆಯ ತತ್ವವನ್ನು ಬದುಕಿನಲ್ಲಿ ಅನುಸರಿಸಿದರೆ ಆ ವ್ಯಕ್ತಿಯ ಬಾಳು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ನಿತ್ಯ ಬದುಕಿಗೆ ಗೀತೆ ಹೇಗೆ ಅವಶ್ಯಕ..?ಒಂದು ಉದಾಹರಣೆಯನ್ನು ನೋಡೋಣ.. ಆಹಾರದಿಂದಲೇ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ.ಶರೀರದ ಆರೋಗ್ಯ ಚೆನ್ನಾಗಿರಬೇಕೆಂದರೆ ಸೇವಿಸುವ ಆಹಾರವೂ ಚೆನ್ನಾಗಿರಬೇಕು.ಆಹಾರವನ್ನು ಜಾಸ್ತಿ ಅಥವಾ ಕಡಿಮೆ ಸೇವಿಸಬಾರದು.ಜಾಸ್ತಿ ಆಹಾರ ಅಥವಾ ಕಡಿಮೆ ಆಹಾರವನ್ನು ಸೇವಿಸುವುದರಿಂದ ಶರೀರದಲ್ಲಿ ಅನಾರೋಗ್ಯವುಂಟಾಗುತ್ತದೆ.ಇದನ್ನೇ ಭಗವದ್ಗೀತೆಯ ...
ವಿಜ್ಞಾನ ಗೊಬ್ಬರ:- ಲೀಗೋ vs. ಬಿಗ್ ಬ್ಯಾಂಗ್ 'ಸಾಪೇಕ್ಷ ಸಿದ್ಧಾಂತ' (Theory of Relativity) ವಿಜ್ಞಾನದಲ್ಲಿ ಬಹು ಚರ್ಚಿತ ಸಿದ್ಧಾಂತಗಳಲ್ಲಿ ಪ್ರಮುಖವಾದುದು. ಇದು ಮೂಲಭೂತವಾಗಿ ಎರಡು ವಿಭಾಗಗಳಲ್ಲಿ ಪ್ರಕಟಗೊಂಡಿದೆ. ಪ್ರಥಮವಾಗಿ ಐನ್‌ಸ್ಟೈನ್‍ರವರು ೧೯೦೫ರಲ್ಲಿ 'ವಿಶೇಷ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು. ಎರಡನೆಯದಾಗಿ ೧೯೧೫ರಲ್ಲಿ 'ಸಾಮಾನ್ಯ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು. ಸಾಪೇಕ್ಷ ಸಿದ್ಧಾಂತವು ಪ್ರಕೃತಿಯ ಸಕಲ ಘಟನೆಗಳ ಹಿಂದಿನ ಮೂಲಭೂತ ವಿಚಾರಗಳಿಗೆ ಸಮರ್ಪಕ ಉತ್ತರವನ್ನು ನೀಡುತ್ತದೆ ಎಂದು ಅವರ ವಾದ. ಈ ವಿಚಾರಗಳೆಂದರೆ: ಕಾಲ (Time), ಚಲನೆ (Motion), ದ್ರವ್ಯ (Matter), ರಾಶಿ (Mass), ಅವಕಾಶ (Space), ಮತ್ತು ಗುರುತ್ವಶಕ್ತಿ (Gravitational Force).  ಇದೇನು ಭಾರತೀಯರಿಗೆ ಹೊಸ ವಿಷಯವಾಗಿರಲಿಲ್ಲ. ನಮ್ಮ ದಾಸವರೇಣ್ಯರು, ಶರಣರು, ಹರಿಕಥಾಕಾರರೂ ಇವನ್ನೆಲ್ಲ ಸರಳ ಸರಾಗವಾಗಿ ವಿವರಿಸುತ್ತಿದ್ದರು. ಆದರೆ ಆಧುನಿಕ ವಿಜ್ಞಾನದಲ್ಲಿ ಈ ಎಲ್ಲಾ ಮಂಡನೆಗಳು ಬಹಳ ಸುಳ್ಳುಗಳಿಂದಲೇ ಬೆಸೆಯಲ್ಪಟ್ಟಿವೆ ಎಂಬುದು ಸಾಮಾನ್ಯ ಜ್ಞಾನದಿಂದಲೇ (Common Sense) ತಿಳಿದುಬರುತ್ತದೆ. ಮಂಡಿಸಿದ ಸಿದ್ಧಾಂತಕ್ಕೆ ಬದ್ಧವಾಗಿರದೆ, ಬೇಕಾದಾಗ ಬೇಕಾದಂತೆ ಬದಲಾಯಿಸಿಕೊಳ್ಳುತ್ತಾರೆ. ಎಲ್ಲವೂ ಸೇರಿಕೊಂಡಿರುವ ಘನ ಗೋಳವು ಸ್ಫೋಟಗೊಂಡು (Big Bang) ಅದರ ತುಣುಕುಗಳೇ ಬ್ರಹ್ಮಾಂಡದ ಅವಯವಗಳು ಎಂದು...

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...
✌ಪ್ರಮುಖ100 ಪಿತಾಮಹರುಗಳು✌ 1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್ 2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್ 3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್ 4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್ 5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್ 6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್ 7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ 8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್ 9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ 10)ಬೀಜಗಣಿತದ ಪಿತಾಮಹ👉ರಾಮಾನುಜಂ 11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್ 12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್ 13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್ 14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್ 15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್ 16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್ 17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್ 18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್ 19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್ 20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ 21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್ 22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ 23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ...
ಉಸ್ತಾದ್ ಬಿಸ್ಮಿಲ್ಲಾ ಖಾನ್ ಮೊನ್ನೆ ಮಾರ್ಚ್ 21ರಂದು ನಮ್ಮ TRPಭಕ್ತ ಚಾನೆಲ್ಲುಗಳೆಲ್ಲಾ ಅಸಾದುದಿದ್ದೀನ್ ಓವೈಸಿ, ಕನ್ಹಯ್ಯಾಕುಮಾರ್ ನಂಥವರ ಬಗ್ಗೆ ಕಾರ್ಯಕ್ರಮಗಳ ಪ್ರಸಾರದಲ್ಲಿ Busyಯಾಗಿದ್ದರೆ ಭಾರತರತ್ನ ಪುರಸ್ಕೃತ ಮಹಾನ್ ಕಲಾಕಾರರೊಬ್ಬರ ಜನ್ಮದಿನ ಅವರ ನೆನಪೇ ಇಲ್ಲದಂತೆ ಕಳೆದುಹೋಯಿತು. 21 ಮಾರ್ಚ್ 1916ರಂದು ಬಿಹಾರ್ ನ ಧುಮ್ರಾವ್ ನಲ್ಲಿ ಭಾಷಾ ಖಾನ್ ಮತ್ತು ಮಿಠ್ಠನ್ ಬಾಯಿಯವರ ಎರಡನೆಯ ಪುತ್ರನಾಗಿ ಜನಿಸಿದವರೇ ಅಮೀರುದ್ದೀನ್. ಮುಂದೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂದು ಪ್ರಸಿದ್ಧಿ ಪಡೆದವರು. ವಂಶಪಾರಂಪರ್ಯವಾಗಿ ಬಂದ ಶಹನಾಯಿವಾದನವು ಹಿಂದೂಸ್ಥಾನಿ ಸಂಗೀತದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆಯಲು ಅಪಾರವಾದ ಕೊಡುಗೆಯನ್ನು ನೀಡಿದವರು.          "ಜಗತ್ತಿನ ಅಂತ್ಯವಾದರೂ, ಸಂಗೀತ ಉಳಿಯುತ್ತದೆಂದು ನಂಬಿದ್ದ' ಕಲಾಸಾಮ್ರಾಜ್ಯದ ಉಸ್ತಾದರು ಒಂದು ಕಾಲದಲ್ಲಿ ಶಹನಾಯಿಯ ಲೋಕದಲ್ಲಿ ಏಕಸ್ವಾಮ್ಯತೆಯನ್ನು ಸ್ಥಾಪಿಸಿದವರು. ಈಗಲೂ ಶಹನಾಯಿಯೆಂದರೆ ನೆನಪಾಗುವುದು ಉಸ್ತಾದ್ ಬಿಸ್ಮಿಲ್ಲಾ ಖಾನರೇ. 1947 ಆಗಸ್ಟ 15ರಿಂದ ಹಿಡಿದು 2006ರ ಅವರ ಕೊನೆಯ ದಿನಗಳವರೆಗೂ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಪ್ರಧಾನಿ ಭಾಷಣದ ನಂತರ ಕಾರ್ಯಕ್ರಮವನ್ನು ನಡೆಸಿಕೊಡುವ ಗೌರವತ್ವವನ್ನು ಹೊಂದಿದ್ದರು. ಇವರ ಮೊದಲ ಗುರುವೆಂದರೆ ಇವರ ಮಾವನಾದ ಅಲಿ ಭಕ್ಷಿಯವರು. ಅಂದಿನಿಂದ ಹಿಂತಿರುಗಿದ ಸಂದರ್ಭವೇ ಇಲ್ಲ. ಕಲೆಯನ...