Skip to main content

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು! ✍ಚಕ್ರವರ್ತಿ ಸೂಲಿಬೆಲೆ

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು!

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು!

ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ.
ಸ್ಟೀಫನ್ಗೆ ಆಪರೇಶನ್ ಮಾಡಿದರೆ ಮಾತೇ ನಿಂತು ಹೋಗುತ್ತೆ. ಮಾಡದೇ ಹೋದರೆ ಉಸಿರೇ ನಿಂತು ಹೋಗುತ್ತೆ. ಆಕಾಶಕಾಯಗಳ ಅಧ್ಯಯನಕ್ಕಾಗಿ ಸ್ಟೀಫನ್ನ ಉಸಿರು ಗಟ್ಟಿಯಾಗಿರಬೇಕಾದ್ದು ಅವಶ್ಯ. ಆ ಅಧ್ಯಯನದ ಅಂಶಗಳನ್ನು ಇತರರಿಗೆ ತಿಳಿಸಲು ಮಾತೂ ಸ್ಫುಟವಾಗಿರಬೇಕು. ಹಾಗಾದ್ರೆ ಏನು ಮಾಡೋದು? ಜೇನ್ ಹಾಕಿಂಗ್ ತುಮುಲಕ್ಕೆ ಬಿದ್ದಳು. ಕೊನೆಗೊಂದು ನಿಧರ್ಾರಕ್ಕೆ ಬಂದಳು. ಸ್ಟೀಫನ್ಗೆ ಆಪರೇಶನ್ ಮಾಡಿಸಲಾಯ್ತು.
ಅವನ ಗಂಟಲ ನಾಳವನ್ನು ತುಂಡರಿಸಲಾಗಿತ್ತು. ಇಷ್ಟು ದಿನ ತೊದಲು ನುಡಿಗಳನ್ನಾಡುತ್ತಿದ್ದ ಸ್ಟೀಫನ್, ಈಗ ಅಕ್ಷರಶಃ ಶಾಂತನಾಗಿಬಿಟ್ಟ. ಬಾಯಿಂದ ಒಂದೇ ಒಂದು ಅಕ್ಷರ ಹೊರಡಿಸಲಾಗುತ್ತಿರಲಿಲ್ಲ. ಅವನ ಬದುಕು ಅಂಧಕಾರಮಯವಾಯ್ತು. ಗಂಟಲ ಭಾಗದಲ್ಲಿ ರಂಧ್ರವೊಂದನ್ನು ಕೊರೆದು ಅಲ್ಲಿಂದ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೀಫನ್ ಕುಗ್ಗಿಬಿಟ್ಟ. ತನ್ನ ಬದುಕು ಮುಗಿಯಿತೆಂದು ಹಲುಬತೊಡಗಿದ್ದ. ಜೇನ್ಳಿಗೆ ಅದೇನೆನ್ನಿಸಿತೋ ಏನೋ? ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಿ ಗಂಡನನ್ನು ಮನೆಗೆ ಕರೆತಂದಳು.
ಅದು ಯಾವಾಗಲೂ ಹಾಗೆಯೇ. ಆಸ್ಪತ್ರೆಯ ವಾತಾವರಣವೇ ಉಸಿರು ಕಟ್ಟಿಸುವಂಥದ್ದು. ಅಲ್ಲಿ ಬಹಳ ಕಾಲ ನಿಂತಷ್ಟೂ ಮನಸ್ಸು ಕುಗ್ಗುತ್ತದೆ. ಸ್ಮಶಾನ ವೈರಾಗ್ಯ ಹುಟ್ಟಿಬಿಡುತ್ತದೆ! ಬದುಕೇ ಸಾಕು ಎನಿಸಲಾರಂಭಿಸುತ್ತದೆ. ಸ್ಟೀಫನ್ ಕುಗ್ಗುತ್ತ ಹೋದುದನ್ನು ಕಂಡ ಜೇನ್ ಅವನನ್ನು ಮನೆಗೆ ಕರೆತಂದಳು. ಅವನ ಆರೈಕೆಯ ಹೊಣೆ ತಾನೇ ಹೊತ್ತಳು.
ಸರಿ ಆರೈಕೆಯೇನೋ ಮಾಡಬಹುದು. ಆದರೆ ಅದಕ್ಕೆ ತಗಲುವ ಹಣದ ಖರ್ಚನ್ನು ಭರಿಸುವವರಾರು? ಜೇನ್ ಕಾಲೇಜಿಗೆ ಬೇಡಿಕೆ ಇಟ್ಟಳು, ಸಕರ್ಾರಕ್ಕೆ ಗೋಗರೆದಳು. ಯಾರೂ ಪ್ರತಿಕ್ರಿಯಿಸಲಿಲ್ಲ. ಕೊನೆಗೆ ಅಮೆರಿಕದ ಸಂಸ್ಥೆಯೊಂದು ವರ್ಷಕ್ಕೆ 50 ಸಾವಿರ ಪೌಂಡುಗಳನ್ನು ಆರೋಗ್ಯದ ಖಚರ್ಿಗೆಂದು ನೀಡಲಾರಂಭಿಸಿತು. ಕ್ಯಾಲಿಫೋನರ್ಿಯಾದ ಕಂಪ್ಯೂಟರ್ ತಯಾರಿಕಾ ಅಗ್ರಣಿ ವಾಲ್ಟ್ ವೋಲ್ಟೋಸ್ ಸ್ಟೀಫನ್ಗಾಗಿ ಕಂಪ್ಯೂಟರ್ ಒಂದನ್ನು ಕಳುಹಿಸಿಕೊಟ್ಟ. ಈ ಕಂಪ್ಯೂಟರ್ನ ‘ಈಕ್ವೆಲೈಸರ್’ ಎನ್ನುವ ಪ್ರೋಗ್ರಾಂ ಪರದೆಯ ಮೇಲೆ ಪದವನ್ನು ಗುರುತಿಸಿ ವಾಕ್ಯವನ್ನು ರಚಿಸುವ ಶಕ್ತಿ ತುಂಬುತ್ತಿತ್ತು. ಕೈಯನ್ನು ಸಾಮಾನ್ಯವಾದ ಅಲುಗಾಟ-ಕುಲುಕಾಟಗಳಿಂದಲೇ ಆತ ಈ ಪದಗಳನ್ನು ಬರೆಯಬಹುದಿತ್ತು. ತಲೆಯ ಅಲುಗಾಟ-ಕಣ್ಣಿನ ತೀವ್ರ ನೋಟಗಳಿಂದಲೂ ಆತ ಈ ಕೆಲಸ ಮಾಡಬಹುದಿತ್ತು. ಆರಂಭದಲ್ಲಿ ಸ್ವಲ್ಪ ತೊಂದರೆ ಎನಿಸುತ್ತಿತ್ತು. ಆತ ನಿಮಿಷಕ್ಕೆ ಹತ್ತು ಪದಗಳನ್ನು ಬರೆಯಬಲ್ಲವನಾಗಿದ್ದ. ನಿರಂತರ ಅಭ್ಯಾಸದ ನಂತರ ನಿಮಿಷಕ್ಕೆ ಹದಿನೈದು ಪದಗಳನ್ನು ಬರೆಯುವಷ್ಟು ಸಿದ್ಧಿ ಪಡೆದ. ಅವನು ಬರೆದದ್ದನ್ನು ಕಂಪ್ಯೂಟರ್ ಓದಿ ಹೇಳುತ್ತಿತ್ತು. ಹಲವರಿಗೆ ಇದೇ ಸುಲಭ ಎನಿಸಲಾರಂಭಿಸಿತ್ತು. ಮೊದಲೆಲ್ಲ ಸ್ಟೀಫನ್ ಆಡಿದ ಮಾತುಗಳನ್ನು ಅಥರ್ೈಸಿಕೊಳ್ಳಲು ಮಧ್ಯವತರ್ಿಯ ಜರೂರತ್ತಿತ್ತು. ಈಗ ಆ ಸಮಸ್ಯೆ ಇರಲಿಲ್ಲ!
1
ಕಂಪ್ಯೂಟರ್ ಮೇಲಿನ ಹಿಡಿತ ಕುದುರುತ್ತಿದ್ದಂತೆ ಹಾಕಿಂಗ್ ತನ್ನ ಪುಸ್ತಕ ರಚನೆಯ ಕಾರ್ಯವನ್ನು ಮುಂದುವರಿಸಿದ. ಮತ್ತೆ ಮತ್ತೆ ತಿದ್ದಿದ. ಕೊನೆಗೊಂದು ದಿನ ‘ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪ್ರಕಟವೂ ಆಯಿತು. ಪ್ರಕಾಶಕರು ದಂಗಾಗಿಬಿಡುವಷ್ಟರಮಟ್ಟಿಗೆ ಪುಸ್ತಕಕ್ಕೆ ಬೇಡಿಕೆ ಬಂತು. ನೋಡುತ್ತ ನೋಡುತ್ತಲೇ ಹತ್ತುಲಕ್ಷ ಪ್ರತಿಗಳು ಖಚರ್ಾದವು. ಈ ಪುಸ್ತಕ ಎಲ್ಲ ಹಳೆಯ ಮಾರಾಟ ದಾಖಲೆಗಳನ್ನು ಮುರಿದು ಹಲವಾರು ತಿಂಗಳುಗಳ ಕಾಲ ‘ನಂಬರ್ ಒನ್’ ಪಟ್ಟದಲ್ಲಿಯೇ ಇತ್ತು.
ಸ್ಟೀಫನ್ನ ತೆಕ್ಕೆಗೆ ಹಣದ ಸುರಿಮಳೆಯೇ ಆಯ್ತು. ಜಗತ್ತಿನಾದ್ಯಂತ ಪುಸ್ತಕಕ್ಕೆ ಬೇಡಿಕೆ ಬಂತು. ನೀವು ಬಹುಶಃ ನಂಬುವುದಿಲ್ಲ. ವರ್ಷ ಕಳೆಯುವುದರೊಳಗೆ ಎಂಭತ್ತು ಲಕ್ಷ ಪ್ರತಿ ಮಾರಾಟವಾಯ್ತು. ಬೇರೆ ಬೇರೆ ಭಾಷೆಗಳಿಗೆ ಆ ಪುಸ್ತಕ ಅನುವಾದಗೊಂಡಿತು. ಸಾವಿರಾರು ಜನ ಪುಸ್ತಕದ ಅಧ್ಯಯನ ಮಾಡಿದರು. ಹಾಕಿಂಗ್ ಹೋದೆಡೆಯೆಲ್ಲ ಆ ಪುಸ್ತಕದ್ದೇ ಚಚರ್ೆಯಾಗುತ್ತಿತ್ತು. ವಿಮಾನ ನಿಲ್ದಾಣದ ಬುಕ್ ಸ್ಟಾಲುಗಳಲ್ಲಿ ಪುಸ್ತಕ ಸಿಗಬೇಕೆಂಬ ಹಾಕಿಂಗ್ನ ಕನಸು ನನಸಾಗಿತ್ತು.
ಈ ಪುಸ್ತಕ ಪ್ರಭಾವಳಿ ಬೆಳಗಿದ್ದರಿಂದಲೇ ಮತ್ತೊಂದು ಪುಸ್ತಕ ರಚನೆಯ ಸಾಹಸಕ್ಕೆ ಸ್ಟೀಫನ್ ಕೈ ಹಾಕಿದ್ದು.
ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ. ಪಾಟರ್ಿಯ ಆಯೋಜಕರನ್ನು ಕರೆದು ನಾನು ‘ಸಾಕು’ ಎನ್ನುವವರೆಗೆ ಪಾಟರ್ಿ ನಿಲ್ಲಿಸುವಂತಿಲ್ಲ ಎಂದ.
ಎಲ್ಲರಿಗೂ ಅಚ್ಚರಿ. ಹಾಕಿಂಗ್ ವ್ಹೀಲ್ ಚೇರ್ನೊಂದಿಗೇ ನೃತ್ಯದ ಅಖಾಡಕ್ಕಿಳಿದ. ಎಲ್ಲರೊಂದಿಗೂ ನೃತ್ಯ ಮಾಡಿದ. ಇಡಿಯ ರಾತ್ರಿ ಆತ ಇದೇ ಮೂಡಲ್ಲಿದ್ದ!
ಹೌದು. ಸ್ಟೀಫನ್ ಮತ್ತು ಜೇನ್ರ ಬದುಕಲ್ಲಿ ಇದೊಂದು ಹೊಸ ಅಧ್ಯಾಯ. ಅವರ ಬದುಕಿಗೆ ಬೇಕಾಗುವಷ್ಟು ಹಣ ಹರಿದು ಬರಲಾರಂಭಿಸಿತ್ತು. ಬಡತನ ಮಾಯವಾಗಿತ್ತು. ಅದರೊಟ್ಟಿಗೆ ಬದುಕಿನ ಶೈಲಿಯನ್ನೂ ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದುಬಿಟ್ಟಿತ್ತು. ಅದೇ ಬದುಕಿನ ವೈಪರೀತ್ಯ. ಇಂದು ಇದ್ದದ್ದು ನಾಳೆ ಇರುವುದಿಲ್ಲ. ಆದರೆ ಆ ನಾಳೆಯ ದಿನಕ್ಕೆ ನಾವು ಒಗ್ಗಿ ಹೋಗಿ ಇಂದಿನ ಬದುಕನ್ನು ಮರೆಯಬಾರದು ಅಷ್ಟೇ!
ಸ್ಟೀಫನ್-ಜೇನ್ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಅದರ ನಡುವೆಯೇ ಪುಟವಿಟ್ಟ ಚಿನ್ನದಂತೆ ಬೆಳಗಿದ್ದರು.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...