Skip to main content

ನಾವು ತಿಳಿಯದ ಗೋಧಿಯ ಇನ್ನೊಂದು ಭಯಾನಕ ಮುಖ: ಶ್ರೀ ಅನಂತಜೀ


ಪ್ರತಿದಿನ ನಾವು ತಿನ್ನುವ ಗೋಧಿಯನ್ನು ನಮ್ಮ ಪೂರ್ವಜರು ತಿನ್ನುವುದಿರಲಿ ಕಣ್ಣಲ್ಲೂ ಕೂಡ ಯಾರು ನೋಡಲೇ ಇಲ್ಲ…….!!!
ಅಮೇರಿಕಾ ವಿಜ್ಞಾನಿಗಳು ಈ ಗೋಧಿಯನ್ನು ‘Wheat’ ಎಂದು ಯಾರೂ ಕರೆಯುವುದಿಲ್ಲ. ಈ ಗೋಧಿಗೆ ‘ಟ್ರಿಟಿಕಂ ವಲ್ಗೇರ್’  ಎಂದು ಕರೆಯುತ್ತಾರೆ……!! ಈ ಹೆಸರು ಎಷ್ಟೋ ಜನರಿಗೆ ಗೊತ್ತೇ ಇಲ್ಲ……!!

ಈ ಗೋಧಿ ಕೇವಲ 51 ವರ್ಷಗಳ ಹಿಂದೆ ಅಂದರೆ 1965 ರಲ್ಲಿ ಅಮೇರಿಕಾ ಸರ್ಕಾರವು ಗೋಧಿರವೆ ಮಾಡಿ ಹಡಗಿನಲ್ಲಿ ತಂದು ನಮ್ಮ ದೇಶದ ಹಳ್ಳಿ-ಹಳ್ಳಿಗಳಿಗೂ ಕೊಟ್ಟು, ಶಾಲೆಗಳಲ್ಲಿ ರವೆ ಉಪ್ಪಿಟ್ಟು ಮಾಡಿ ಉಚಿತವಾಗಿ ತಿನ್ನಿಸಿ, ಈ ಗೋಧಿಯನ್ನು ತಿನ್ನಲು ಕಲಿಸಿದರು…….!! 1975 ರ ನಂತರ ಈ ಗೋಧಿಯನ್ನು ನಮ್ಮ ದೇಶದಲ್ಲೇ ಬೆಳೆಸಲಾಯಿತು. ಮೊದಲು ಗೋಧಿಯನ್ನು ಬೆಳೆದ ರಾಜ್ಯ ಪಂಜಾಬ್…ಇಂದು ಪಂಜಾಬ್ ರಾಜ್ಯ ದೇಶದ ದೊಡ್ಡ ಕ್ಯಾನ್ಸರ್ ರಾಜ್ಯ……..!! ಪಂಜಾಬ್ ರಾಜ್ಯದಲ್ಲಿ ಒಂದೊಂದು ಮನೆಯಲ್ಲಿ 2 ರಿಂದ 3 ಜನ ಕ್ಯಾನ್ಸರ್ ರೋಗಿಗಳಿದ್ದಾರೆ…….! ಹೇಳಬೇಕೆಂದರೆ ಇಡೀ ರಾಜ್ಯವೇ ಕ್ಯಾನ್ಸರ್ ರಾಜ್ಯ…….!!!

ವಿಪರ್ಯಾಸವೆಂದರೆ ಭಾರತೀಯರೆಲ್ಲರು ಬಹಳ ಸಂತೋಷದಿಂದ ಅಮೇರಿಕಾದಿಂದ ಬಂದ ಈ ಗೋಧಿಯನ್ನು ತಿನ್ನಲು ಕಲಿತದು.
ಆತ್ಮೀಯರೇ ಕನಿಷ್ಟ ಪಕ್ಷ ಒಮ್ಮೆಯಾದರು ನೀವು ತಿನ್ನುತ್ತಿರುವ ಗೋಧಿಯ ಬಗ್ಗೆ ಯೋಚಿಸಿದ್ದೀರಾ……? ನಮ್ಮ ಪೂರ್ವಜರು ಕಣ್ಣಲ್ಲೂ ನೋಡದಂತಹ ಈ ಗೋಧಿಯನ್ನು ತಿನ್ನುವ ಮುನ್ನ ತುಸು ವಿಚಾರ ಮಾಡಿ ತಿನ್ನಿರಿ.

ನಿರಂತರವಾಗಿ ಈ ಗೋಧಿಯನ್ನು ತಿನ್ನುವುದರಿಂದ ಗೋಧಿಯಲ್ಲಿರುವ ಗ್ಲೂಟೇನ್  ಎಂಬ ರಾಸಾಯನಿಕ ನಮ್ಮ ಕರುಳಿನ ಒಳಭಾಗದಲ್ಲಿ ಲೇಪನವಾಗುವುದು. ಆಗ ದೇಹದ ಉಷ್ಣತೆ ಹೆಚ್ಚಾಗಿ ನಿಮಗೆ ಮಲಬದ್ಧತೆಯಾಗುತ್ತದೆ. ಮಲಬದ್ಧತೆಯಾದಾಗ ತಿಂದಂತಹ ಆಹಾರ ಕೊಳೆಯುತ್ತದೆ. ತಿಂದ ಆಹಾರ ಕೊಳೆತಾಗ ಗಾಳಿ ಉತ್ಪತ್ತಿಯಾಗುತ್ತದೆ. ಆ ಗಾಳಿಯನ್ನು ಗ್ಯಾಸ್ಟ್ರೈಟೀಸ್ ಎಂದು ಕರೆಯುತ್ತೇವೆ. ನೀವೀಗ ಜೀವನ ಪರ್ಯಂತ ಗ್ಯಾಸ್ಟ್ರೈಟೀಸ್ ಮಾತ್ರೆಯನ್ನು ನುಂಗಬೇಕಾಗುತ್ತದೆ. ತಿಂದಂತಹ ಆಹಾರ ಕಟ್ಟಿಕೊಂಡು ಕೊಳೆಯುವ ಕ್ರಿಯೆಯಿಂದ ಯಥೇಚ್ಛವಾಗಿ ಟಾಕ್ಸೀನ್ ಉತ್ಪತ್ತಿಯಾಗುತ್ತದೆ. ಈ ಎಲ್ಲಾ ಗಲೀಜು ನೇರವಾಗಿ ನಿಮ್ಮ ರಕ್ತದಲ್ಲಿ ಬೆರೆಯುತ್ತದೆ. ಈಗ ಶುರುವಾಯಿತು ನೋಡಿ ನಾನಾ ತರಹದ ಖಾಯಿಲೆಗಳು.

ಆತ್ಮೀಯರೇ ಇಷ್ಟಕ್ಕೇ ಮುಗಿಯಲಿಲ್ಲ….. ಈ ಗೋಧಿಯಲ್ಲಿರುವ ಗ್ಲೂಟೇನ್  ನಿಮ್ಮ ಕೀಲುಗಳ ಮಧ್ಯೆ ಇರುವ ಸೈನೋವಿಲ್ ದ್ರವವನ್ನು ಹಂತ-ಹಂತವಾಗಿ ಒಣಗಿಸಿ ನಿಮ್ಮನ್ನು ಸಂದಿವಾತ (ಅರ್ಥರೈಟೀಸ್) ರೋಗಿಗಳನ್ನಾಗಿ ಮಾಡಿ ಜೀವನವನ್ನು ನರಕಮಯವಾಗಿಸುತ್ತದೆ.
ಆತ್ಮೀಯರೇ ಮತ್ತೊಂದು ಭಯಾನಕ ಸಂಗತಿ ಏನೆಂದರೆ ಈ ಗೋಧಿಯಲ್ಲಿರುವ ಗ್ಲೂಟೇನ್  ನಿಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸುತ್ತದೆ. ಬೀಟಾ ಜೀವಕೋಶಗಳ ನಿಷ್ಕ್ರಿಯತೆಯಿಂದ ಇನ್ಸುಲಿನ್ ಉತ್ಪತ್ತಿಯು ಕಮ್ಮಿಯಾಗುತ್ತಾ ಹೋಗಿ ನೀವು ಜೀವನ ಪರ್ಯಂತ ಡಯಾಬಿಟೀಸ್ ರೋಗಿಗಳಾಗುತ್ತೀರಿ.

ಆತ್ಮೀಯರೇ ಭಾರತೀಯರು ಎಷ್ಟೆಷ್ಟು ಬೇಗ ರೋಗಿಗಳಾಗುತ್ತಾರೋ ಅಷ್ಟೇ ಸಂತೋಷಪಡುತ್ತವೆ ವಿದೇಶದಲ್ಲಿರುವ ಔಷಧಿ ಕಂಪನಿಗಳು. ಈ ಎಲ್ಲಾ ಔಷಧಿ ಕಂಪನಿಗಳ ಮೂಲ ಉದ್ದೇಶವೇ ಜನಗಳನ್ನು ವ್ಯವಸ್ಥಿತವಾಗಿ ರೋಗಿಗಳನ್ನಾಗಿ ಮಾಡಿ ಹಣಗಳಿಸುವುದೇ ಆಗಿದೆ. ಭಾರತೀಯರು ತಮಗರಿವಿಲ್ಲದಂತೆ ರೋಗಿಗಳಾಗಲೆಂದೇ ಗೋಧಿಯನ್ನು ಹಡಗಿನಲ್ಲಿ ತಂದು ಹಳ್ಳಿ ಹಳ್ಳಿಗೂ ಹಂಚಿದರು.
ನಮ್ಮ ಹಿರಿಯರು ಗೋಧಿಯನ್ನು ತಿನ್ನಲಿಲ್ಲ ಹಾಗಾಗಿ ಗ್ಯಾಸ್ಟ್ರೈಟೀಸ್, ಮಲಬದ್ಧತೆ, ಸಂಧಿವಾತ, ಫೈಲ್ಸ್, ಡಯಾಬಿಟೀಸ್ ಈ ಯಾವ ಖಾಯಿಲೆಗಳ ಹೆಸರೂ ಕೂಡ ನಮ್ಮ ಪೂರ್ವಜರಿಗೆ ಗೊತ್ತಿರಲಿಲ್ಲ.

ಆತ್ಮೀಯರೇ ನಾವು ಯಾಕೆ ಗೋಧಿಯನ್ನು ತಿಂದು ಇಂತಹ ರೋಗವನ್ನು ತಂದುಕೊಂಡು ಬಲಿಪಶುಗಳಂತೆ ಜೀವನವನ್ನು ಹಾಳುಮಾಡಿಕೊಳ್ಳಬೇಕು. ಈ ಎಲ್ಲಾ ಖಾಯಿಲೆಗಳು ನಿಮಗೆ ಬೇಡವೆಂದರೆ ಇಂದೇ ಗೋಧಿ ಮತ್ತು ಅದರಿಂದ ತಯಾರಿಸಿದ ನಾನಾ ರೀತಿಯ ಪದಾರ್ಥಗಳನ್ನು ಕಸದ ತೊಟ್ಟಿಗೆ ಹಾಕಿ. ಉಳಿದ ಜೀವನವನ್ನು ಆರೋಗ್ಯ ಪೂರ್ಣರಾಗಿ ಬದುಕಿ ಎಂದು ಗೋಧಿಯ ಹಿಂದಿರುವ ಭಯಾನಕ ಮಾಹಿತಿಯನ್ನು ಅಂಕಿ-ಅಂಶಗಳೊಂದಿಗೆ ತಿಳಿಸಿದರು. ನಿಜವಾಗಿಯೂ ಯೋಗ ವಿಸ್ಮಯ ಶಿಬಿರವು ಜನಗಳನ್ನು ವಿಸ್ಮಯಗೊಳಿಸುತ್ತಿರುವುದರಲ್ಲಿ ಯಾವ ಅನುಮಾನವು ಇಲ್ಲ.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...