Skip to main content

Posts

Showing posts from March, 2018

ವಯಸ್ಸು ನೂರಾಹನ್ನೊಂದು, ಹಸಿದು ಬಂದವರಿಗೆ ಕೊಡದೆ ಕಳಿಸಿಲ್ಲ ತುತ್ತು! ✍ಪ್ರತಾಪ ಸಿಂಹ

ಅಮೆರಿಕದಲ್ಲೊಂದು ರಿಮೋಟ್ ವಿಲೇಜ್. ಆ ದೂರದ, ದುರ್ಗಮ ಹಳ್ಳಿಯಲ್ಲೊಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ಅಜ್ಜಿ ಹಾಗೆ.. ಅಜ್ಜಿ ಹೀಗೆ… ಅಂತೆಲ್ಲಾ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್‌ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಎಲ್ಲರ ಕಣ್ಣು ಕೆಂಪಾಗಿರುತ್ತದೆ. ಒಂದು ದಿನ ಅಜ್ಜಿ ಮನೆಯಲ್ಲಿರುತ್ತಾಳೆ. ಐವರು ಶ್ವೇತ ವರ್ಣೀಯ ಹುಡುಗರು ಅಜ್ಜಿ ಮನೆಗೆ ಬರುತ್ತಾರೆ. ಅವರಲ್ಲೊಬ್ಬ ತನ್ನ ಕೈಯನ್ನು ಮುಂದೆ ಚಾಚಿ.. ಏ ಮುದುಕಿ, ನನ್ನ ಕೈಯಲ್ಲೊಂದು ಹಕ್ಕಿ ಇದೆ. ಅದು ಸತ್ತಿದೆಯೋ, ಬದುಕಿದೆಯೋ? ಹೇಳು ಎನ್ನುತ್ತಾನೆ. ಕಣ್ಣೇ ಕಾಣದ ಅಜ್ಜಿ ಹೇಗೆ ತಾನೇ ಅಂತಹ ಪ್ರಶ್ನೆಗೆ ಉತ್ತರಿಸಲು ಸಾಧ್ಯ? ಆದರೆ ಅಜ್ಜಿಗೆ ಆ ಹುಡುಗರ ಉದ್ದೇಶ ಅರ್ಥವಾಗುತ್ತದೆ. ಕರಿಯಳಾದ ತನ್ನನ್ನು ಅವಮಾನಿಸಲು, ಕುರುಡಿಯಾಗಿರುವ ತನ್ನ ದೈಹಿಕ ಊನವನ್ನು ಹಂಗಿಸಲು, ಅವಹೇಳನ ಮಾಡಲು ಬಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಜ್ಜಿ ಒಂದು ನಿಮಿಷ ಏನನ್ನೂ ಮಾತಾಡುವುದಿಲ್ಲ. ಆಕೆಗೆ ನಗು ಬರುತ್ತದೆ. ನಿನ್ನ ಕೈಯಲ್ಲಿರುವ ಹಕ್ಕಿ ಸತ್ತಿದೆಯೋ, ಬದುಕಿದೆಯೋ ನನಗೆ ಗೊತ್ತಿಲ್ಲ. ಆದರೆ ಅದು ನಿನ್ನ ಕೈಯಲ್ಲಿರುವುದಂತೂ ನಿಜ. ಒಂದು ವೇಳೆ ಸತ್ತಿದ್ದರೆ, ಅದು ಸತ್ತ ರೂಪದಲ್ಲೇ ನಿನಗೆ ಸಿಕ್ಕಿರಬಹುದು ಇಲ್ಲವೇ ನೀನೇ ಸಾ...

12 ಜ್ಯೋತಿರ್ಲಿಂಗಗಳು

ಹಿಂದುಗಳ ಪವಿತ್ರ 12 ಜ್ಯೋತಿರ್ಲಿಂಗಗಳ ನಡುವಿನ‌ ಈ ರಹಸ್ಯ ಕಂಡು ವಿಜ್ಞಾನಿಗಳೇ ಬೆಚ್ಚಿಬಿದ್ದಾದ್ದಾರೆ!!! ಏನು ಆ ವಿಸ್ಮಯ ಗೊತ್ತೆ? ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಚಾಣಾಕ್ಷ ಬುದ್ಧಿಮತ್ತೆ, ಸ...

ಅವರು ಹಾಗೆ ಬದುಕಿದ್ದರು, ಹಾಗಾಗಿ ದೇಶಕ್ಕಿಂದೂ ಅವರ ನೆನಪಿದೆ ✍ಪ್ರತಾಪ ಸಿಂಹ

ಸೈಮನ್ ಆಯೋಗ ಇಂಗ್ಲೆಂಡ್‌ನಿಂದ ಆಗಮಿಸಿತ್ತು, ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡ ಬೇಕೆಂಬುದನ್ನು ನಿರ್ಧರಿಸಲು. ಅದು ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಸೈಮನ್ ಕಮಿಷನ್ನಿಗೆ ಕಪ್ಪು ಬಾವುಟ ತೋರಿಸುವ ಮತ್ತು ‘ವಾಪಸ್ಸು ಹೋಗಿ’ ಎಂದು ಘೋಷಣೆ ಹಾಕುವ ಯೋಜನೆ ಅದಾಗಿತ್ತು. ಸೈಮನ್ ವಿರೋಧಿ ಪ್ರದರ್ಶನದ ನಿರ್ಧಾರ ಆಗುತ್ತಿದ್ದಂತೆಯೇ ಲಾಲಾ ಲಜಪತರಾಯರ ಮನೆಗೆ ಹೋಗಿ ಪ್ರತಿಭಟನೆಯ ನೇತೃತ್ವ ವಹಿಸುವಂತೆ ಅವರನ್ನು ಒಪ್ಪಿಸಿ ಬಂದಿದ್ದ ಮತ್ತಾರೂ ಅಲ್ಲ, ಭಗತ್ ಸಿಂಗ್! ಒಂದು ದಿನ ಸಾಯಂಕಾಲ ವೀರಕಲಿಗಳ ಕಥೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದುವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಮಗ ಹೇಳಿದ- ‘ಅಪ್ಪಾ, ಈ ಗದ್ದೆಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೇ ಬಾಂಬ್ ಗಿಡ ನೆಡಲು ಗುಂಡಿ ...

#ShaeedDiwas

It's time to salute three great revolutionaries Bhagat Singh,Sukhdev and Rajguru... Courageous sons of # Mother_India ऐ मेरे वतन के लोगों ज़रा आँख में भर लो पानी जो शहीद हुए हैं उनकी ज़रा याद करो क़ुरबानी # InquilabZindabad

"ಬ್ರಾಹ್ಮಣ ಭೋಜನ ಪ್ರಿಯ" ತುಂಬಾ ಜನ ಇದನ್ನು ಕೊಂಕು ಮಾತಾಗಿ ಉಪಯೋಗಿಸುತ್ತೀರಾ..! ಸರಿಯಾಗಿ ಅರ್ಥ ತಿಳಿದುಕೊಂಡು ಮಾತನಾಡುವುದು ಒಳಿತು..

"ಬ್ರಾಹ್ಮಣ ಭೋಜನ ಪ್ರಿಯಃ" , ಬರೀ ಇದೊಂದೇ ಸಾಲು ಮಾತ್ರನಾ ಇರೋದು, ಖಂಡಿತಾ ಇಲ್ಲ.. "ಅಲಂಕಾರ ಪ್ರಿಯೋ ವಿಷ್ಣು ಅಭಿಷೇಕ ಪ್ರಿಯಃ ಶಿವಃ | ನಮಸ್ಕಾರ ಪ್ರಿಯಃ ಭಾನುಃ ಬ್ರಾಹ್ಮಣ ಭೋಜನ ಪ್ರಿಯಃ || ಶ್ರೀ ಪಾರ್ವತೀ ದೇ...

ನನ್ನ ನೆಚ್ಚಿನ ಅಂಕಣಕಾರರು ಮತ್ತು ಅವರ ಅಂಕಣಗಳು

ಕಷ್ಟಗಳ ಮಳೆ- ಸಾಧನೆಯ ಹೊಳೆ ✍ಚಕ್ರವರ್ತಿ ಸೂಲಿಬೆಲೆ

ಕಷ್ಟಗಳ ಮಳೆ- ಸಾಧನೆಯ ಹೊಳೆ ಸ್ಟೀಫನ್ ದಿನಚರಿ 11 ಗಂಟೆಗೆ ಆರಂಭವಾಗುತ್ತದೆ. ಅವತ್ತಿನ ದಿನದ ಭೇಟಿಗಳ ಬಗ್ಗೆ ಸೆಕ್ರೆಟರಿ ವರದಿ ನೀಡಿದ ನಂತರ ವಿಜ್ಞಾನದೊಳಗೆ ಮುಳುಗಿ ಹೋಗುತ್ತಾನೆ. ಭೇಟಿಗೆ ಬಂದವರೊಡನೆ ಕಂಪ್ಯೂಟರಿನ ಮೂಲಕವೇ ಮಾತನಾಡಿಸುತ್ತಾನೆ. ಒಂದು ಗಂಟೆಯಾಯಿತೆಂದರೆ ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ ತನ್ನ ಕಂಪ್ಯೂಟರೀಕೃತ ಗಾಲಿಕುಚರ್ಿಯನ್ನು ಕೊಠಡಿಯ ಹೊರತಂದು ಮನೆಯತ್ತ ಪಯಣ ಬೆಳೆಸುತ್ತಾನೆ. ಅದನ್ನು ಏನಂತ ಬೇಕಾದರೂ ಕರೀರಿ. ಅದೊಂದು ಅದ್ಭುತ ಪವಾಡ ಅಷ್ಟೇ! ಮೃತ್ಯುವಿನ ಕುಣಿಕೆಯನ್ನು ಕೊರಳಿಗೆ ಸುತ್ತಿಕೊಂಡೇ, ಗೆಲುವಿನ ಗಂಟೆ ಬಾರಿಸುವುದು ತಮಾಷೆಯ ಮಾತಲ್ಲ. ಸ್ಟೀಫನ್ ಹಾಕಿಂಗ್ ಅದನ್ನು ಮಾಡಿ ತೋರಿಸಿದ್ದ. ಮದುವೆಯಾಗುವ ವೇಳೆಗೆ ಅವನಿಗೆ ಕೆಲಸವಿರಲಿಲ್ಲ. ಈಗಲೋ ಆಗಲೋ ಸಾಯುತ್ತಾನೆಂದುಕೊಂಡವರಿಗೆಲ್ಲ ಅಚ್ಚರಿಯಾಗುವಂತೆ ಮಕ್ಕಳಾದವು. ಮಗುವಿನ ಶಾಲೆಯ ಫೀಸು ತುಂಬುವಷ್ಟೂ ಸಂಬಳವಿರಲಿಲ್ಲ. ಅವನು ಬರೆದ ಒಂದು ಪ್ರಬಂಧ ಅವನ ಕೀತರ್ಿ ಪತಾಕೆಯನ್ನು ಎತ್ತರಕ್ಕೇರಿಸಿತು. ಆಮೇಲೆ ಅವನು ಹಿಂದಿರುಗಿ ನೋಡಿದ್ದೇ ಇಲ್ಲ. ಈಗ ನೋಡಿ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ಮುಂದೆ ನಿಲ್ಲುವವನು ಸ್ಟೀಫನ್! ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವನಿಗೆಂದೇ ವಿಶೇಷ ಕೊಠಡಿ ಮಾಡಲಾಗಿದೆ. ಅದರೊಳಗೆ ಪುಟ್ಟ ಆಸ್ಪತ್ರೆಯೇ ಇದೆ. ಕೋಣೆಯ ಒಳ ಹೊರಗೆ ಗಿಜಿಗುಡುವ ಸದ್ದು. ಅಲ್ಲಿ...

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು! ✍ಚಕ್ರವರ್ತಿ ಸೂಲಿಬೆಲೆ

ಮಾತೇ ಬಾರದವ ಬರೆದು ಸಾಧಿಸಿದ್ದು ಬೆಟ್ಟದಷ್ಟು! ಸ್ಟೀಫನ್ ಬದುಕಿನ ಮಜಾ ಏನು ಅಂದರೆ, ಆತ ಎಂದಿಗೂ ಕತ್ತಲ ಕೋಣೆಯಲ್ಲಿ ಕಳೆಯದಿದ್ದುದು. ತನ್ನ ಬದುಕು ಮುಗಿಯಿತೆಂದು ಆತ ಎಂದಿಗೂ ಯೋಚಿಸಲೇ ಇಲ್ಲ. ರಾಕ್ಫೆಲ್ಲರ್ ಯುನಿವಸರ್ಿಟಿ ಹಾಕಿಂಗ್ನ ಕಾರ್ಯಕ್ರಮ ಆಯೋಜಿಸಿತ್ತು. ಭಾಷಣ, ಚಚರ್ೆಗಳ ನಂತರ ಪಾಟರ್ಿಯನ್ನೂ ಏರ್ಪಡಿಸಲಾಗಿತ್ತು. ಆದರೆ ಹಾಕಿಂಗ್ ಉಪನ್ಯಾಸದ ನಂತರ ನದಿಯ ದಂಡೆಯ ಮೇಲೆ ಹೋಗಿ ಕುಳಿತ. ‘ಇನ್ನು ಪಾಟರ್ಿಯ ಕತೆ ಮುಗಿದೇಹೋಯ್ತು. ಹಾಕಿಂಗ್ ನದಿಯ ಮುಂದೆ ರೋಧಿಸುತ್ತಾ ಕುಳಿತುಬಿಟ್ಟ’ ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಮರಳಿ ಬಂದ. ಸ್ಟೀಫನ್ಗೆ ಆಪರೇಶನ್ ಮಾಡಿದರೆ ಮಾತೇ ನಿಂತು ಹೋಗುತ್ತೆ. ಮಾಡದೇ ಹೋದರೆ ಉಸಿರೇ ನಿಂತು ಹೋಗುತ್ತೆ. ಆಕಾಶಕಾಯಗಳ ಅಧ್ಯಯನಕ್ಕಾಗಿ ಸ್ಟೀಫನ್ನ ಉಸಿರು ಗಟ್ಟಿಯಾಗಿರಬೇಕಾದ್ದು ಅವಶ್ಯ. ಆ ಅಧ್ಯಯನದ ಅಂಶಗಳನ್ನು ಇತರರಿಗೆ ತಿಳಿಸಲು ಮಾತೂ ಸ್ಫುಟವಾಗಿರಬೇಕು. ಹಾಗಾದ್ರೆ ಏನು ಮಾಡೋದು? ಜೇನ್ ಹಾಕಿಂಗ್ ತುಮುಲಕ್ಕೆ ಬಿದ್ದಳು. ಕೊನೆಗೊಂದು ನಿಧರ್ಾರಕ್ಕೆ ಬಂದಳು. ಸ್ಟೀಫನ್ಗೆ ಆಪರೇಶನ್ ಮಾಡಿಸಲಾಯ್ತು. ಅವನ ಗಂಟಲ ನಾಳವನ್ನು ತುಂಡರಿಸಲಾಗಿತ್ತು. ಇಷ್ಟು ದಿನ ತೊದಲು ನುಡಿಗಳನ್ನಾಡುತ್ತಿದ್ದ ಸ್ಟೀಫನ್, ಈಗ ಅಕ್ಷರಶಃ ಶಾಂತನಾಗಿಬಿಟ್ಟ. ಬಾಯಿಂದ ಒಂದೇ ಒಂದು ಅಕ್ಷರ ಹೊರಡಿಸಲಾಗುತ್ತಿರಲಿಲ್ಲ. ಅವನ ಬದುಕು ಅಂಧಕಾರಮಯವಾಯ್ತು. ಗಂಟಲ ಭಾಗದಲ್ಲಿ ರಂಧ್...

ದೇವರಿಲ್ಲ, ವಿಜ್ಞಾನವೇ ಎಲ್ಲ! ✍ಚಕ್ರವರ್ತಿ ಸೂಲಿಬೆಲೆ

ದೇವರಿಲ್ಲ, ವಿಜ್ಞಾನವೇ ಎಲ್ಲ! ಸ್ಟೀಫನ್ ವಿಶ್ವದ ಉಗಮ ಮತ್ತು ಅತ್ಯಂದ ಬಗ್ಗೆ ಮಂಡಿಸಿದ ಚಿಂತನೆಗಳಂತೂ ಕ್ರಿಶ್ಚಿಯನ್ ಧರ್ಮದ ಬುಡವನ್ನು ಅಲ್ಲಾಡಿಸಿಬಿಟ್ಟವು. ವಿಶ್ವದ ಉಗಮವೂ ಆಗಿರಲಿಲ್ಲ, ಅಂತ್ಯವೂ ಆಗಲಾರದು ಎಂಬ ಅವನ ಮಾತಿಗೆ ಪೋಪ್ ಆಕ್ಷೇಪವೆತ್ತಿದ್ದರು. ಭಗವಂತನ ರೀತಿಗಳ ಬಗ್ಗೆ ವಿಚಾರಣೆ ನಡೆಸಿದರೆ ನೋಡು ಎಂದು ಎಚ್ಚರಿಕೆ ಕೊಟ್ಟು ಬಾಯ್ಮುಚ್ಚಿಸುವ ಪ್ರಯತ್ನ ನಡೆಸಿದ್ದರು. ಹಾಗಂತ ಸ್ಟೀಫನ್ ಹೆದರಿಬಿಟ್ಟ ಎಂದೇನಲ್ಲ. ದೊಡ್ಡ ಕಾಯಗಳನ್ನು ಗಮನಿಸಿ ಅಧ್ಯಯನ ಮಾಡಬೇಕು ಅನ್ನೋದು ಬರಿ ಹುಚ್ಚಾಗಿತ್ತು ಅಷ್ಟೇ. ಆ ನೆಪದಲ್ಲಿ ಪಿ.ಎಚ್.ಡಿ ಸಿಕ್ಕಿಬಿಟ್ಟರೆ ಬದುಕಿಗೆ ಆಧಾರವಾದೀತು ಎಂಬ ನಂಬಿಕೆ ಇತ್ತು. ಆದರೆ ಆದದ್ದೇ ಬೇರೆ. ಕಣ್ಣಿಗೆ ಕಾಣುವ ಗ್ರಹಗಳನ್ನು ಬಿಟ್ಟು ಕಾಣದೇ ಇರುವ ಕಪ್ಪು ರಂಧ್ರಗಳ ಅಧ್ಯಯನ ಶುರುವಾಯ್ತು. ಅದ್ಯಾವ ಮಾಯೆಯೋ ಏನೋ? ಆ ಕಪ್ಪು ರಂಧ್ರಗಳ ಬಗ್ಗೆ ಹೇಳಿದ್ದೆಲ್ಲ ವೇದವಾಕ್ಯವಾಯ್ತು. ಕೆಲವೇ ವರ್ಷಗಳ ಮೊದಲು ಕಪ್ಪು ರಂಧ್ರಗಳು ಕೆಲಸಕ್ಕೆ ಬಾರದ ಕಾಯಗಳಾಗಿದ್ದವು. ಸ್ಟೀಫನ್ ಕೂಡಾ ಅಷ್ಟೇ. ಕೆಲಸಕ್ಕೆ ಬಾರದ ರೋಗಿಷ್ಟನಾಗಿದ್ದ. ಈಗ ನೋಡಿ. ಕಪ್ಪು ರಂಧ್ರಗಳು ಕುತೂಹಲದ ಕಣಜಗಳಾಗಿದ್ದರೆ, ಸ್ಟೀಫನ್ ವಿಜ್ಞಾನ ಲೋಕದ ಮಾಂತ್ರಿಕನಾಗಿಬಿಟ್ಟ! ಸ್ಟೀಫನ್ ವಿಶ್ವದ ಉಗಮ ಮತ್ತು ಅತ್ಯಂದ ಬಗ್ಗೆ ಮಂಡಿಸಿದ ಚಿಂತನೆಗಳಂತೂ ಕ್ರಿಶ್ಚಿಯನ್ ಧರ್ಮದ ಬುಡವನ್ನು ಅಲ್ಲಾಡಿಸಿಬಿಟ್ಟವು...

ಬದುಕಿಗೆ ಬೆಳಕು ಕೊಟ್ಟ ಕಪ್ಪು ರಂಧ್ರಗಳು! ✍ಚಕ್ರವರ್ತಿ ಸೂಲಿಬೆಲೆ

1980 ರ ಆರಂಭವಿರಬಹುದು. ಹಾಕಿಂಗ್ನ ಮಾತು ಅಸ್ಪಷ್ಟವಾಯ್ತು. ಆತ ಮಾತನಾಡುವಾಗ ತಡವರಿಸುತ್ತಿದ್ದ. ಬಹುಕಾಲ ಜೊತೆಯಲ್ಲಿದ್ದವರಿಗೆ ಮಾತ್ರ ಅವನ ಮಾತು ಅರ್ಥವಾಗುತ್ತಿತ್ತು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್ ರೋಗದ ಮತ್ತೊಂದು ಲಕ್ಷಣ ಅದು. ಮೊದಲು ಕೈ ಕಾಲುಗಳ ಸ್ವಾಧೀನ ತಪ್ಪುತ್ತದೆ, ಆನಂತರ ಮಾತು ನಿಲ್ಲುತ್ತದೆ. ಹಾಕಿಂಗ್ನ ಅದೃಷ್ಟವೆಂದರೆ ರೋಗದ ಎರಡೂ ಲಕ್ಷಣಗಳ ನಡುವೆ ದೀರ್ಘಕಾಲದ ಅಂತರವಿತ್ತು. ಆತನ ಕೈಕಾಲುಗಳು ಸೋತು ಬಸವಳಿದಿದ್ದರೂ ಮಾತು ಗಟ್ಟಿಯಾಗಿತ್ತು. ಆದರೆ ಈಗ ಮಾತೇ ಕೈಕೊಟ್ಟಿತು. ಕಣ್ಣಿಗೆ ಕಾಣದ ಕಪ್ಪು ರಂಧ್ರಗಳನ್ನು ಕಂಡು, ಅವುಗಳ ಉಗಮ-ಬದುಕು-ಸಾವು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಸ್ಟೀಫನ್ ವಣರ್ಿಸಿದ್ದು ಗೊತ್ತೇ ಇದೆ ತಾನೆ? ಕಪ್ಪು ರಂಧ್ರಗಳು ಕೊನೆಗೊಮ್ಮೆ ಸ್ಫೋಟಗೊಳ್ಳುತ್ತವೆ ಎನ್ನುವ ಅವನ ವಾದವನ್ನು ಕೆಲವು ವಿಜ್ಞಾನಿಗಳು ‘ರಬ್ಬಿಶ್’ ಎಂದಿದ್ದರು. ಹಾಗೆಂದರೆ ಮೂರ್ಖತನದ ಪರಮಾವಧಿ ಎಂದರ್ಥ! ಇದೇ ರಬ್ಬಿಶ್ ಸಿದ್ಧಾಂತ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ‘ನೇಚರ್’ನಲ್ಲಿ ಪ್ರಕಟವಾದ ನಂತರ ಜಾಗತಿಕ ಮಟ್ಟದ ವಿಜ್ಞಾನಿಗಳ ನಡುವೆ ಆ ಸಿದ್ಧಾಂತ ಚಚರ್ೆಗೆ ಬಂದುಬಿಟ್ಟಿತ್ತು. ಅದರೊಟ್ಟಿಗೇ ಸ್ಟೀಫನ್ ಕೂಡ ಖ್ಯಾತಿಗೆ ಬಂದುಬಿಟ್ಟ. ಅವನ ದೈಹಿಕ ಸಮಸ್ಯೆಯನ್ನು ಆಗ ತೀಕ್ಷ್ಣವಾಗಿ ಗ್ರಹಿಸಿದ ಕಾಲೇಜು ಅವನಿಗೊಂದು ವಿಶಾಲವಾದ ಮನೆ ಕೊಟ್ಟಿತು. ಕಾಲೇಜಿಗೆ ಹತ್ತಿರವ...