Skip to main content

ಜೀವನದಲ್ಲಿ ಪ್ರೀತಿಯಿದ್ದವನಿಗೆ ಮಾತ್ರ ಸಂತೋಷ, ನೆಮ್ಮದಿ, ಯಶಸ್ಸು ಸಿಗಲು ಸಾಧ್ಯ

79 ವರೆ ಸೆಕೆಂಡ್ ತಾಳ್ಮೆಯಿಂದ ಓದಿ ಮನಸ್ಸಿಗೆ ಹೌದು ಎನಿಸುತ್ತದೆ*
ಒಂದು ದಿನ ಸಂಜೆ,
ಯಾರೋ ಮನೆ ಬಾಗಿಲು ತಟ್ಟಿದರು.

ಬಾಗಿಲು ತೆಗೆದು ನೋಡಿದರೆ ಹೊರಗಡೆ ನಾಲ್ವರು ಅಪರಿಚಿತರು
ನಿಂತಿದ್ದರು.
‘ಯಾರೋ ಪ್ರವಾಸಿಗರಂತೆ ಕಾಣುತ್ತಿದ್ದೀರಿ. ಬನ್ನಿ ಒಳಗೆ’ ಎಂದು ಆತ  ಆಹ್ವಾನಿಸಿದ.

 ‘ಹೆಂಡತಿ-ಮಕ್ಕಳು ಮನೆಯಲ್ಲಿದ್ದಾರೆಯೇ?’ ಎಂದು ಕೇಳಿದ  ನಾಲ್ವರಲ್ಲೊಬ್ಬ. ‘ಇಲ್ಲ. ಅವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೇನು
ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ.

ಯಾಕೆ?’ ಎಂದು ಕೇಳಿದ ಮನೆಯಾತ.

 ‘ಹಾಗಾದರೆ ಅವರು ಬರುವವರೆಗೆ ನಾವು ಒಳ ಬರುವಂತಿಲ್ಲ’ ಎಂದ ಇನ್ನೊಬ್ಬ.

ಸ್ವಲ್ಪ ಹೊತ್ತಿನ ನಂತರ ಹೆಂಡತಿ, ಮಕ್ಕಳು ಮನೆಗೆ ವಾಪಸಾದರು.

ಆಗ ಮನೆಯಾತ ಅಪರಿಚಿತರು ಬಂದಿರುವ ಬಗ್ಗೆ ಹೇಳಿದ.

‘ಆ ನಾಲ್ವರು ಇಲ್ಲೇ ಎಲ್ಲೋ ಇರಬೇಕು. ಹುಡುಕಿ ಕರೆದುಕೊಂಡು  ಬಾ’ ಎಂದು ಮನೆಯ ಯಜಮಾನ  ಮಗನನ್ನು ಕಳುಹಿಸಿದ. 

ಸ್ವಲ್ಪ ದೂರದಲ್ಲಿ ಹೋಗುತ್ತಿದ್ದ ಆ ನಾಲ್ವರನ್ನು ಮಗ ಮನೆಗೆ ಆಹ್ವಾನಿಸಿದ.

ಆಗ ಒಬ್ಬ ಹೇಳಿದ ‘ನಾವು ನಾಲ್ಕೂ ಜನರು ಏಕಕಾಲಕ್ಕೆ ಮನೆಯೊಳಗೆ ಬರುವುದಿಲ್ಲ’.

‘ಹೌದಾ? ಹಾಗೇಕೆ?’ ಎಂದು ಕೇಳಿದ ಮಗ.

ಪಕ್ಕದಲ್ಲಿ ನಿಂತಿದ್ದವನನ್ನು ತೋರಿಸಿ ಒಬ್ಬ ಹೇಳಿದ;
ಈತನ ಹೆಸರು ಸಂಪತ್ತು, ಅವರಿಬ್ಬರು ಸಂತೋಷ ಮತ್ತು
ಯಶಸ್ಸು , ನಾನು ಪ್ರೀತಿ. ನಾವೆಲ್ಲರೂ ಒಟ್ಟಿಗೆ ಬರುವುದಿಲ್ಲ. ನಾಲ್ವರಲ್ಲಿ ಯಾರು ಬರಬೇಕೆಂದು ಕೇಳಿಕೊಂಡು ಬಾ’ ಎಂದ.

ಮಗ ಮನೆಗೆ ಬಂದು ನಡೆದ ವಿಷಯ ತಿಳಿಸಿದ.

ಅಪ್ಪ ಹೇಳಿದ ‘ಹಾಗಾದರೆ ಯಶಸ್ಸನ್ನು ಕರೆಯೋಣ.
ಅವನಿಂದ ಮನೆಗೆ ಒಳಿತಾಗುತ್ತದೆ’.

ಅಮ್ಮ ಅದಕ್ಕೆ ಒಪ್ಪಲಿಲ್ಲ, ಆಕೆ ಸಂಪತ್ತನ್ನು ಕರೆಯೋಣ ಎಂದಳು.

ಮಗಳು ಸಂತೋಷವನ್ನೇ ಕರೆಯೋಣ ಎಂದಳು.

‘ಬೇಡ ನಾವು ಪ್ರೀತಿಯನ್ನು ಒಳಗೆ ಕರೆಯೋಣ’ ಎಂದು ಮಗ ಘೋಷಿಸಿದ. ಎಲ್ಲರೂ ಮಗನ ಮಾತನ್ನು  ಒಪ್ಪಿದರು. 

ಮಗ ನಾಲ್ವರಿದ್ದಲ್ಲಿಗೆ ಬಂದು, ‘ನಿಮ್ಮಲ್ಲಿ ಪ್ರೀತಿ ಎನ್ನುವವರು ನಮ್ಮ ಮನೆಗೆ ಬರಬಹುದು’ ಎಂದ. 

ಪ್ರೀತಿ ಎದ್ದು ಮನೆ ಕಡೆಗೆ ನಡೆದು ಬರತೊಡಗಿದ, 

ಅಚ್ಚರಿಯೆಂಬಂತೆ ಉಳಿದ ಮೂವರೂ ಆತನನ್ನು ಹಿಂಬಾಲಿಸಿಕೊಂಡು ಬಂದರು!

ಹುಡುಗ ಕೇಳಿದ ‘ನಾಲ್ವರೂ ಒಟ್ಟಿಗೆ ಬರಲಾಗದು ಎಂದಿರಲ್ಲ?!

ಆಗ ಪ್ರೀತಿ ನಕ್ಕು ಹೇಳಿತು, ‘ನೀವು ಸಂತೋಷ, ಸಂಪತ್ತು,
ಯಶಸ್ಸಿನಲ್ಲಿ ಯಾರಾದರೊಬ್ಬರನ್ನು ಆರಿಸಿಕೊಂಡಿದ್ದರೆ ಅವರು  ಮಾತ್ರ ಬರುತ್ತಿದ್ದರು. ಆದರೆ ನೀವು ಪ್ರೀತಿಯನ್ನು
ಆಹ್ವಾನಿಸಿದ್ದರಿಂದ ಉಳಿದ ಮೂರೂ ಕೂಡ ನಿಮಗೆ ಸಿಗುತ್ತದೆ. 

ಪ್ರೀತಿ ಇರುವಲ್ಲಿ ಸಂತೋಷ, ಸಂಪತ್ತು, ಯಶಸ್ಸು ಮನೆ
ಮಾಡುತ್ತದೆ’ ಎಂದ.

ಜೀವನದಲ್ಲಿ ಪ್ರೀತಿಯಿದ್ದವನಿಗೆ ಮಾತ್ರ ಸಂತೋಷ, ನೆಮ್ಮದಿ, ಯಶಸ್ಸು ಸಿಗಲು ಸಾಧ್ಯ.

ದ್ವೇಷದಿಂದ ಸಾಧಿಸಲಾಗದನ್ನು ಪ್ರೀತಿಯಿಂದ ಸಾಧಿಸಬಹುದು.           
  

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...