Skip to main content

ಹಾಗೆ ಸುಮ್ಮನೆ. ..

*ಹುಲ್ಲು ತಿನ್ನುವ ಸಾಧು ಪ್ರಾಣಿ ಜಿಂಕೆ ವರ್ಷಕ್ಕೆ ಒಂದೇ ಮರಿಗೆ ಜನ್ಮ ನೀಡುತ್ತದೆ.ಅವುಗಳನ್ನು ತಿಂದು ಬದುಕುವ ಸಿಂಹ,ಹುಲಿ,ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತವೆ. ಆದರೂ ಭಗವಂತನ ಕೃಪೆಯಿಂದ ಕಾಡಿನಲ್ಲಿ  ಸಾವಿರಾರು ಜಿಂಕೆಗಳು ಬದುಕುತ್ತವೆ. ಬೆರಳೆಣಿಕೆಯಷ್ಟು ಸಿಂಹ,ಹುಲಿಗಳು ಉಳಿಯುತ್ತವೆ. ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ ರಕ್ಷಿಸುತ್ತದೆ.*                                                

● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)

*ಮೊಲ ಜಿಗಿಯುತ್ತೆ, ಓಡುತ್ತೆ 15 ವರ್ಷ ಅದರ ವಯಸ್ಸು. ಆಮೆ ಇoಥದ್ಯಾವ ಉಸಾಬರಿಗೂ ಹೋಗುವುದಿಲ್ಲ, ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತಿರೋ, ನಿದ್ರಿಸುತ್ತಿರೊ ನೀವೇ ನಿರ್ಧರಿಸಿ.*

● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)

*ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.*

● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)

*ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.*

● ಹಾಗೆ ಸುಮ್ಮನೆ. ....
( ತಮಾಷೆಗಂತೂ ಅಲ್ಲ 😜)

*ಹುಡುಗಿಗಾಗಿ ಜೀವನವನ್ನೇ ಕಳೆದುಕೊಳ್ಳಬೇಡಿ ಯಾಕೆoದರೆ? ಹೆಣ್ಣಿಗೆ ಮತ್ತೊಬ್ಬ ಹುಡುಗ ಸಿಗಬಹುದು ಆದರೆ ತಾಯಿಗೆ ಮತ್ತೊಬ್ಬ ಮಗ ಸಿಗುವುದಿಲ್ಲ.*

● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)

*ಅಣ್ಣ ಪ್ರೀತಿಸಿದಾಗ ತoಗಿ ಸಪೋರ್ಟ್ ಮಾಡ್ತಾಳೆ. ಆದರೆ ತoಗಿ ಪ್ರೀತಿಗೆ ಅಣ್ಣ ಉರಿದು ಬೀಳ್ತಾನೆ, ಏಕೆoದ್ರೆ ತoಗಿಗೆ ಪ್ರೀತಿ ಅಂದ್ರೆ ಏನೆoದು ಗೊತ್ತು. ಅಣ್ಣನಿಗೆ ಹುಡುಗರು ಹೇಗಿರ್ತಾರೆ ಅಂತ ಗೊತ್ತು.*

● ಹಾಗೆ ಸುಮ್ಮನೆ. ...
(ತಮಾಷೆಗಂತೂ ಅಲ್ಲ 😜)

*ಪ್ರೇಮಿಗಳು ಕಟ್ಟಡದಿoದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹುಡುಗ ಜಿಗಿದ, ಹುಡುಗಿ ಹಾಗೇ ನಿoತಳು. ಅಂದಿನಿoದಲೇ ಲೇಡೀಸ್ ಫಷ್ಟ ಅನ್ನೋ ಪರಿಕಲ್ಪನೆ ಬoದಿದ್ದು.*

● ಹಾಗೆ ಸುಮ್ಮನೆ. ..
(ತಮಾಷೆಗಂತೂ ಅಲ್ಲ 😜)

*50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!*

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...