Skip to main content

🐮 ಮಾಂಸದ ಬೆಲೆ💰

ಮಗಧ ಸಾಮ್ರಾಟ ಬಿಂದುಸಾರನು ಒಮ್ಮೆ ತನ್ನ ಆಸ್ಥಾನದಲ್ಲಿ ಕೇಳಿದನು:
ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಲು
ಎಲ್ಲಕ್ಕಿಂತ ಅಗ್ಗದ ವಸ್ತು ಯಾವುದು?

ಮಂತ್ರಿಗಳು ಮತ್ತು ಇತರ ಸದಸ್ಯರು ಯೋಚನೆಯಲ್ಲಿ ಮುಳುಗಿದರು. ಅಕ್ಕಿ, ಗೋಧಿ, ಜೋಳ, ನವಣೆ, ಸೆಜ್ಜೆ, ಮುಂತಾದವು ಬಹಳ ಪರಿಶ್ರಮದಿಂದ ಸಿಗುತ್ತವೆ, ಅದು ಕೂಡ ಪ್ರಕೃತಿ ವಿಕೋಪ ಇಲ್ಲವಾದರೆ. ಇಂತಹ ಸ್ಥಿತಿಯಲ್ಲಿ ಆಹಾರ ಅಗ್ಗವಾಗಲಾರದು.

ಆಗ ಬೇಟೆಯ ಹುಚ್ಚು ಇರುವ ಸಾಮಂತನೊಬ್ಬ ಹೇಳಿದ:
ರಾಜಾ,
ಎಲ್ಲಕ್ಕಿಂತ ಅಗ್ಗದ ಆಹಾರ ಮಾಂಸ!

ಇದನ್ನು ಪಡೆಯಲು ಪರಿಶ್ರಮ ಕಡಿಮೆ ಸಾಕು ಮತ್ತು ಪೌಷ್ಟಿಕ ಆಹಾರವೂ ತಿನ್ನಲು ಸಿಗುತ್ತದೆ. ಎಲ್ಲರೂ ಇದನ್ನು ಸಮರ್ಥಿಸಿದರು.

ಆದರೆ ಪ್ರಧಾನ ಮಂತ್ರಿ ಚಾಣಕ್ಯ ಸುಮ್ಮನಿದ್ದನು.

ಸಾಮ್ರಾಟನು ಅವನನ್ನು ಕೇಳಿದ:
ತಾವು ಇದರ ಬಗ್ಗೆ ಏನು ಹೇಳುತ್ತೀರಾ?

ಚಾಣಕ್ಯನು ಹೇಳಿದ:  ನಾನು ನನ್ನ ವಿಚಾರವನ್ನು ನಾಳೆ ತಮ್ಮ ಮುಂದೆ ಇಡುವೆನು.

ರಾತ್ರಿಯಾದ ಮೇಲೆ ಪ್ರಧಾನ ಮಂತ್ರಿ ಚಾಣಕ್ಯನು ಆ ಸಾಮಂತನ ಮನೆಗೆ ಹೋದ. ಸಾಮಂತ ಬಾಗಿಲು ತೆರೆದು ಇಷ್ಟು ರಾತ್ರಿಯಲ್ಲಿ ಪ್ರಧಾನ ಮಂತ್ರಿ ತನ್ನ ಮನೆಗೆ ಬಂದುದನ್ನು ನೋಡಿ ಗಾಬರಿಗೊಂಡನು!

ಚಾಣಕ್ಯನು ಹೇಳಿದನು:
ಸಂಜೆ ಹೊತ್ತಿಗೆ ಮಹಾರಾಜರು ಒಮ್ಮೆಲೆ ಕಾಯಿಲೆ ಬಿದ್ದರು. ರಾಜವೈದ್ಯರು ಅವರ ಔಷಧಕ್ಕೆ ಯಾರಾದರೂ ದೊಡ್ಡ ಮನುಷ್ಯರ ಹೃದಯದ ಮಾಂಸ ಎರಡು ತೊಲೆ ಸಿಕ್ಕಿದರೆ ರಾಜರ ಪ್ರಾಣ ಉಳಿಯಬಹುದೆಂದು ಹೇಳಿದ್ದಾರೆ.
ಆದ್ದರಿಂದ ನಿಮ್ಮ ಹೃದಯದ 💓 ಕೇವಲ ಎರಡು ತೊಲೆ ಮಾಂಸ ಪಡೆಯಲು ಬಂದಿದ್ದೇನೆ. ಇದಕ್ಕಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ನೀವು ಪಡೆಯಬಹುದು.

ಇದನ್ನು ಕೇಳುತ್ತಲೇ ಸಾಮಂತನ ಮುಖ ಬಿಳುಚಿಕೊಂಡಿತು! ಅವನು ಚಾಣಕ್ಯನ ಕಾಲು ಹಿಡಿದು ಕ್ಷಮೆ ಕೇಳಿದ.
ಅದಕ್ಕೆ ಬದಲಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಈ ಹಣದಿಂದ ಬೇರೆ ಯಾರಾದರೂ ಸಾಮಂತರ ಹೃದಯದ ಮಾಂಸ ತೆಗೆದುಕೊಳ್ಳಲು ಹೇಳಿದ.

ಅದೇ ರೀತಿ ಚಾಣಕ್ಯನು ಅವನನ್ನು ಸಮರ್ಥಿಸಿದ ಎಲ್ಲಾ ಸಾಮಂತರ ಮತ್ತು ಸೇನಾಧಿಕಾರಿಗಳ ಹತ್ತಿರ ಹೋಗಿ ಕೇಳಿದ.

ಎಲ್ಲರ ಹತ್ತಿರವೂ ಅವರ ಹೃದಯದ ಎರಡು ತೊಲೆ ಮಾಂಸ ಕೇಳಿದ. ಆದರೆ ಯಾರೂ ಕೊಡಲು ತಯಾರಿರಲಿಲ್ಲ. ಬದಲಾಗಿ ಎಲ್ಲರೂ ತಮ್ಮನ್ನು ಪಾರು ಮಾಡಲು ಚಾಣಕ್ಯನಿಗೆ ಒಂದು ಲಕ್ಷ, ಎರಡು ಲಕ್ಷ, ಐದು ಲಕ್ಷ, ಹೀಗೆ ಚಿನ್ನದ ನಾಣ್ಯಗಳನ್ನು ಕೊಟ್ಟರು.

ಈ ರೀತಿ ಸುಮಾರು ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಕಲೆ ಹಾಕಿ ಚಾಣಕ್ಯನು ಬೆಳಗಾಗುವುದರೊಳಗೆ ತನ್ನ ಮನೆಗೆ ತಲುಪಿದ.

ಮರುದಿನ ಆಸ್ಥಾನದಲ್ಲಿ ಚಾಣಕ್ಯನು ಸಾಮ್ರಾಟನ ಮುಂದೆ ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಇಟ್ಟುಬಿಟ್ಟ.

ಸಾಮ್ರಾಟನು ಕೇಳಿದ: ಇದೆಲ್ಲಾ ಏನು?

ಚಾಣಕ್ಯನು ಹೇಳಿದನು: ಎರಡು ತೊಲೆ ಮಾಂಸ ಕೊಂಡುಕೊಳ್ಳಲು
ಇಷ್ಟು ಹಣ ಸಂಗ್ರಹವಾಯಿತು. ಆದರೂ ಎರಡು ತೊಲೆ ಮಾಂಸ ಸಿಗಲಿಲ್ಲ!

ರಾಜಾ, ಈಗ ನೀವೇ ಸ್ವತಃ ವಿಚಾರ ಮಾಡಿ ಮಾಂಸ ಎಷ್ಟು ಅಗ್ಗವೆಂದು!

ಜೀವನ ಅಮೂಲ್ಯ. ಯಾವ ರೀತಿ ನಮಗೆ ನಮ್ಮ ಜೀವದ ಮೇಲೆ ಆಸೆ ಇದೆಯೋ ಅದೇ ರೀತಿ ಎಲ್ಲಾ ಜೀವಿಗಳಿಗೂ ತಮ್ಮ ಜೀವದ ಮೇಲೆ ಆಸೆಯಿದೆ, ಆದರೆ ಅವು ತಮ್ಮ ಪ್ರಾಣ ಉಳಿಸಲು ಅಸಮರ್ಥವಾಗಿವೆ ಎಂಬುದನ್ನು ನಾವು ಮರೆಯಬಾರದು.

ಮತ್ತೆ ಮನುಷ್ಯ ತನ್ನ ಪ್ರಾಣ ಉಳಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಾನೆ. ಹೇಳಿ, ಸಂತಸ ಪಡಿಸಿ, ಹೆದರಿಸಿ, ಲಂಚ ಕೊಟ್ಟು, ಇತ್ಯಾದಿ!

ಪ್ರಾಣಿಗಳು ಪಾಪ! ಹೇಳಲಾರವು, ತಮ್ಮ ದುಃಖವನ್ನು ತಿಳಿಸಲಾರವು!

ಹಾಗಾದರೆ ಈ ಕಾರಣಕ್ಕೆ ನಾವು ಅವುಗಳು ಜೀವಿಸುವ ಅಧಿಕಾರವನ್ನು ಕಸಿಯಬಹುದೇ?

ಶುದ್ಧ ಆಹಾರ, ಸಸ್ಯಾಹಾರ!
🍏🍎🍐🍊🍌🍉🍇🍓🍈🍒🍑🍍🥝🥑🍅🍊🍋🍆🥒🥕🌽🌶🥔🍠🌰🌱🌿☘🍀🍃🌾
ಮಾನವ ಆಹಾರ, ಸಸ್ಯಾಹಾರ!

ಪ್ರಾಣಿಗಳ ಜೀವ ಉಳಿಸಲು ಸಹಾಯ ಮಾಡಿ!
🙏🙏🙏

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...