Skip to main content

Indian Culture


ನಮ್ಮಲ್ಲಿ ಪ್ರಾತಃ ಸ್ಮರಣೀಯರಾದ ಕೆಲವು ಮಹಾಮಹಿಳೆಯರನ್ನು ನಿತ್ಯವೂ ನೆನೆಯುವ ವಾಡಿಕೆ ಇದೆ...

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಶ್ಲೋಕ ಇದು ಆದರೆ ಅನೇಕರು ತಪ್ಪಾಗಿ ಗ್ರಹಿಸಿರುವ ಶ್ಲೋಕವೂ ಇದೇ ಆಗಿದೆ :

ಅಹಲ್ಯಾ ದ್ರೌಪದಿ ಸೀತಾ
ತಾರಾ ಮಂಡೋದರೀ ತಥಾ |
ಪಂಚಕನ್ಯಾ ಸ್ಮರೇನ್ನಿತ್ಯಂ
ಮಹಾ ಪಾತಕ ನಾಶನಮ್ ||

ಈ ಶ್ಲೋಕದಲ್ಲಿ ಬರುವ ಐದು ಮಂದಿ ಮಹಾಮಹಿಳೆಯರಲ್ಲಿ *ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರೀ* ಯಾರೊಬ್ಬರೂ ಕನ್ಯೆಯರಲ್ಲ... ನಮ್ಮಲ್ಲಿ ಕನ್ಯಾ ಶಬ್ದ ಯಾವ ಅರ್ಥದಲ್ಲಿ ಬಳಕೆಯಲ್ಲಿದೆ ಹೇಳಿ?... ಇನ್ನೂ ಮದುವೆಯಾಗದ ಸ್ತ್ರೀಯರನ್ನು ನಾವು ಕನ್ಯೆಯರು ಅಂತೀವಲ್ವೇ... ಈ ಶ್ಲೋಕದಲ್ಲಿ ಬಂದ ಯಾರೊಬ್ಬರೂ ಕನ್ಯೆಯರಲ್ಲ, ಎಲ್ಲರೂ ಮದುವೆಯಾದ ಮುತ್ತೈದೆಯರು... ಮತ್ತೆ ಯಾಕೆ ಪಂಚಕನ್ಯಾ ಅಂತ ಬಳಸಿದರು...

ಹಾಗಾದರೆ, ಶ್ಲೋಕದಲ್ಲಿ ಏನೋ ತಪ್ಪಿರಬೇಕು... ಆಗ ನೆನಪಾಗುವವರು 🙏ಬನ್ನಂಜೆಯವರು🙏... ಅವರು ತಪ್ಪು ತೋರಿಸಿ, ತಿದ್ದಿ ನಾವು ಮರೆತ ಅರ್ಥವನ್ನು ಮತ್ತೆ ಪರಿಚಯಿಸಿದ್ದಾರೆ...

ಅದು "ಪಂಚಕನ್ಯಾ ಸ್ಮರೇನ್ನಿತ್ಯಂ" ಅಲ್ಲ..... "ಪಂಚಕಂ ನಾ ಸ್ಮರೇನ್ನಿತ್ಯಂ" ಆಗಬೇಕು ಅಂತ ತಿಳಿಸಿಕೊಟ್ಟಿದ್ದಾರೆ...
ಹಾಗಾದಾಗ ಮಾತ್ರ ಶ್ಲೋಕ ಸರಿಯಾಗುತ್ತದೆ...

ಇದು ಯಾರೋ ಪಂಡಿತರಿಂದಾದ ಪ್ರಮಾದ... "ನಾ" ಶಬ್ದದ ಅರ್ಥ ತಿಳಿಯಲಿಲ್ಲ ಯಾರೋ ಪಂಡಿತರು "ಪಂಚಕನ್ಯಾ" ಅಂತ ಶ್ಲೋಕವನ್ನೇ ತಿದ್ದಿದರು ಅದೇ ಜನರ ಬಾಯಲ್ಲಿ ತಪ್ಪು ಶ್ಲೋಕವಾಯಿತು...

"ನಾ" ಅಂದರೆ ಸಂಸ್ಕೃತದಲ್ಲಿ "ಗಂಡಸು" ಅನ್ನುವ ಅರ್ಥ ಇದೆ...
"ಪಂಚಕಂ ನಾ ಸ್ಮರೇನ್ನಿತ್ಯಂ" ಅಂದರೆ... ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರೀ ಈ ಐದು ಮಹಾಮಹಿಳೆಯರನ್ನ ಬೆಳಗಾತ ಎದ್ದು ಪ್ರತಿಯೊಬ್ಬ "ಗಂಡಸು" ಕೂಡ ನೆನೆಯಬೇಕು ಅನ್ನುತ್ತದೆ ಈ ಶ್ಲೋಕದ ಅರ್ಥ.... ಯಾಕೆಂದರೆ ಈ ಐವರೂ ಕೂಡ ಮಹಾಮಹಿಳೆಯರೆನಿಸಿದ್ದು ಹೇಗೆ ?  ಅವರು ತಮ್ಮ ತಮ್ಮ ಬದುಕಿನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕೂಡ ಧೃತಿಗೆಡದೆ, ಅವಮಾನಗಳನ್ನು ಸಹಿಸಿಕೊಂಡು, ಸಂಕಷ್ಟಗಳನ್ನು ನುಂಗಿಕೊಂಡು, ಧೈರ್ಯದಿಂದ ಪರಿಸ್ಥಿತಿಗಳನ್ನು ಎದುರಿಸಿ, ಜೀವನದ ಅಧೋಗತಿಯಿಂದ ಮೇಲೆದ್ದು ಬಂದು ಪಾರಾದವರು ....

ಅದರಿಂದ ಸರಿಯಾದ ಶ್ಲೋಕ ಹೀಗಿದೆ :
ಅಹಲ್ಯಾ ದ್ರೌಪದಿ ಸೀತಾ
ತಾರಾ ಮಂಡೋದರೀ ತಥಾ |
ಪಂಚಕಂ ನಾ ಸ್ಮರೇನ್ನಿತ್ಯಂ
ಮಹಾಪಾತಕ ನಾಶನಮ್ ||

ಕೆಲವು ಕಡೆ ಸೀತಾ ಬದಲು ಕುಂತಿಯನ್ನು ಇಟ್ಟುಕೊಂಡು ಕೂಡ ಶ್ಲೋಕ ಮಾಡಿದ್ದಾರೆ... ಸೀತೆ ಸಾಕ್ಷಾತ್ ಲಕ್ಷ್ಮೀಯೇ ಆದ್ದರಿಂದ ಸೀತೆಯ ಬದಲಿಗೆ ಕುಂತಿಯನ್ನು ಸೇರಿಸುತ್ತಾರೆ.. ಕುಂತಿ, ಗಾಂಧಾರಿಯರು ಕೂಡ ಮಹಾಮಹಿಳೆಯರೆ...
"ಅಹಲ್ಯಾ ದ್ರೌಪದಿ ತಾರಾ
ಕುಂತೀ ಮಂಡೋದರೀ ತಥಾ"
ಹೀಗೂ ಆಗುತ್ತದೆ...‌

ಇದರಂತೆ ನಾವು ನಿತ್ಯ ಸ್ನಾನ ಮಾಡುವಾಗ ಹೇಳುವ ಶ್ಲೋಕದಲ್ಲಿ ಮರೆತ ಒಂದು ನದಿಯ ಹೆಸರನ್ನು ಕೂಡ ಬನ್ನಂಜೆಯವರು ತಿಳಿಸಿಕೊಟ್ಟು ಆ ಶ್ಲೋಕವನ್ನು ಸರಿಮಾಡಿದ್ದಾರೆ :

ಈಗ ನಾವು ಹೇಳುವ ಶ್ಲೋಕ :
ಗಂಗೇ ಚ ಯಮುನೇ ಚೈವ
ಗೋದಾವರೀ ಸರಸ್ವತಿ |
ನರ್ಮದಾ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ ಕುರು ||

ಅಲ್ಲಿ ಗಂಗೇ ಆದಮೇಲೆ, "ಚ" ಬಂದಿದೆ... ಒಮ್ಮೆ ಚಕಾರ ಬಂದ ಮೇಲೆ ಮತ್ತೆ ಯಾಕೆ ಯಮುನೇ ಆದಮೇಲೆ "ಚೈವ" ಬರಬೇಕು.... ನದಿಯ ಹೆಸರು ಮರೆತ ಯಾರೋ ಪಂಡಿತರು "ಚೈವ" ಸೇರಿಸಿದರು... ಮತ್ತೇ ಮುಂದೆ ಅದೇ ಪ್ರಾಕ್ಟೀಸ್ ಆಯಿತು ತಪ್ಪು ಶ್ಲೋಕವಾಯಿತು...
*ಅದು "ಚೈವ" ಅಲ್ಲ "ಕೃಷ್ಣಾ" ನದಿಯ ಹೆಸರು ಬಿಟ್ಟಿದೆ ಸೇರಿಸಿ ಹೇಳಿಕೊಳ್ಳಿ ಆಗ ಶ್ಲೋಕ ಸರಿಯಾಗುತ್ತದೆ ಅಂತ ಅಂದವರು ಬನ್ನಂಜೆಯವರು ಮಾತ್ರ*

ಗಂಗೇ ಚ ಯಮುನೇ ಕೃಷ್ಣೇ
ಗೋದಾವರೀ ಸರಸ್ವತಿ |
ನರ್ಮದಾ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ ಕುರು ||
ಇದು ಸರಿಯಾದ ಶ್ಲೋಕ...

ನಮಸ್ಕಾರ..‌.

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...